ತುಳು ಲಿಪಿ

Tribute

  • "ಪುಣಿಂಚತ್ತಾಯರು ನಾನಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಚೆಲ್ಲಿ ಶಾಶ್ವತವಾದ ಕೀರ್ತಿ ಪಡೆದು ’ಪಂಡಿತ’ ನಾಮದ ಸಾರ್ಥಕ್ಯವನ್ನು ತುಂಬಿರುತ್ತಾರೆ."
    His Holiness Sri Sri Sri Keshavananda Bharati Swamiji
    Sri Edaneeru Samsthanam
  • ತುಳು ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪುಣಿಂಚತ್ತಾಯರು ಅತ್ಯುತ್ತಮ ಸೇವೆ ಸಲ್ಲಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
    Dr. Veerendra Heggade
  • "ಯಕ್ಷಗಾನ ಅರ್ಥಗಾರಿಕೆಗೆ ಕಾವ್ಯಗುಣವನ್ನು ತುಂಬಿಸುವ ಪ್ರಯತ್ನ, ಕಾವ್ಯದ ಧ್ವನಿ ಮತ್ತು ಪ್ರತಿಮಾ ಶಕ್ತಿಯನ್ನು ಅತ್ಯಂತ ಮನೋಜ್ಞವಾಗಿ ಅಳವಡಿಸಿಕೊಂಡದ್ದು ಇದಕ್ಕೆ ಪುಣಿಂಚತ್ತಾಯರ ವಿಶಿಷ್ಟವಾದ ಕೊಡುಗೆ."
    Dr. Ramananda Banari
  • "ಸತ್ಸಂಗದ ಒಂದು ಉತ್ತಮವಾದ ಮಾದರಿಯನ್ನು ನಾನು ಅವರ ಒಡನಾಟದಲ್ಲಿ ಕಂಡಿದ್ದೇನೆ. ಸುಖ, ಸ೦ಕಟ ವಿನೋದ, ವಿಚಾರ ವಿನಿಮಯ, ಜಿಜ್ಞಾಸೆಗಳಿಗೆ ಸಮಾಧಾನಗಳಲ್ಲಿ ಸದಾ ತೆರೆದ ಮನಸ್ಸಿನ ಸಹಾಯಸಿದ್ಧ ಮನೋಧರ್ಮದ ಪುಣಿಂಚತ್ತಾಯರ ಸ್ನೇಹ ಒಂದು ಸುಖಕರ ಅನುಭವ."
    Dr. Prabhakara Joshi
  • "’ಹಾಲು ಸಕ್ಕರೆ ಸೇರಿ’ ಆಚಾರ್ಯರಾಗುವುದು ಕೆಲವರಿಗೆ ಮಾತ್ರ ಒಪ್ಪುವ ಹೋಲಿಕೆ. ಅ೦ಥವರಲ್ಲಿ ಈಗ ಕಾಣುವವರು ಮಿತ್ರರಾದ ವೆ೦ಕಟರಾಜ ಪುಣಿ೦ಚತ್ತಾಯರು. ಕವಿಯಾಗಿ, ಕಲಾವಿದನಾಗಿ, ಪ್ರಬ೦ಧಕಾರನಾಗಿ, ಸ೦ಶೊಧಕನಾಗಿ ಎಲ್ಲಕ್ಕು ಮಿಗಿಲಾದ ಅಧ್ಯಾಪಕನಾಗಿ ಮೆರೆದ ಪುಣಿ೦ಚತ್ತಾಯರೆ೦ದರೆ ಅವರಿಗೆ ಅವರೇ ಜೋಡಿ."
    Ramachandra Uchchila
  • "ಪುಣಿಂಚತ್ತಾಯರು ತೀರಾ ಸರಳ ಸಜ್ಜನಿಕೆಯ ಸ್ವಭಾವದವರು, ನಿಗರ್ವಿಗಳು. ತುಂಬಿದ ಕೊಡ ತುಳುಕುವುದಿಲ್ಲವೆಂಬ ಮಾತಿಗೆ ಉತ್ತಮ ಉದಾಹರಣೆಯಾಗಿದ್ದಾರೆ."
    Dr. Kayyara Kinyanna Rai
  • "ತುಳು ಭಾಷೆಯ ಪುರಾತನ ಕಾವ್ಯ ಸಂಶೋಧನೆಯ ವಿಚಾರದಲ್ಲಿ ಪುಣಿಂಚತ್ತಾಯರ ಸಾಹಸ ಸಾಧನೆ ಅನ್ಯಾದೃಶ್ಯವಾದದ್ದು."
    Dr. Amrita Someshwar
  • "ತುಳುವಿಗೆ ಪುಣಿಂಚತ್ತಾಯರು ನೀಡಿದ ಕೊಡುಗೆ ಅಪಾರವಾದದ್ದು.ತುಳು ಭಾಷೆಗೆ ಪ್ರತ್ಯೇಕ ಲಿಪಿ ಇದೆಯೆಂದು ಅವರು ಆಧಾರ ಸಹಿತ ತೋರಿಸಿ ಕೊಟ್ಟಿದ್ದಾರೆ."
    Dr. Srikrishna Bhat Arthikaje
  • "ಸಂದರ್ಭಕ್ಕೆ ಸರಿಹೊಂದುವ ಒಂದೆರಡು ವಿಚಾರಗಳನ್ನಷ್ಟೆ ಆಯ್ದುಕೊಂಡು ಸೊಗಸಾಗಿ ನಿರೂಪಿಸುತ್ತ ಪಾಂಡಿತ್ಯ ಪೂರ್ಣವಾಗಿ ಮಾತನ್ನಾಡುವ ಇವರ ಭಾಷಣ ಒಂದು ರಸದೌತಣ. "
    Dr. Radhakrishna Bellur
  • "ತನ್ನನ್ನು ಯಾರೊಬ್ಬರ ಮೇಲೂ ಹೇರಿಕೊಳ್ಳದೆ ಯಾರಿಗೂ ಹೊರೆಯಾಗದೆ ಇನ್ನೊಬ್ಬರ ಅಭಿಪ್ರಾಯಗಳನ್ನು ಗೌರವಿಸುತ್ತ ಸರಳತೆಯಲ್ಲಿ ಸ೦ತೊಷಪಡುತ್ತ, ಕನ್ನಡ-ಮಲಯಾಳಿ-ತುಳು ಭಾಷೆಗಳಿಗೆ ಸೇತುವೆಯಾಗಿ,ಸ೦ಸ್ಕ್ರತಿ-ಸಾಹಿತ್ಯ ಸ೦ಶೋಧನೆಗಳ ಕೈ೦ಕರ್ಯದಲ್ಲಿ ಮಗ್ನರಾಗಿ ತನ್ನ ಬದುಕನ್ನು ಅರ್ಥಪೂರ್ಣಗೊಳಿಸಿಕೊ೦ಡ ಅಪರೂಪದ ಗೆಳೆಯ ಶ್ರೀ ಪುಣಿ೦ಚತ್ತಾಯರು. ಸಜ್ಜನಿಕೆಗೆ ಒ೦ದು ಮಾದರಿ ಅವರು."
    Dr. Chandrashekara Damle

ಆಕಸ್ಮಿಕದಿಂದ ಅತ್ಯುನ್ನತಿಗೆ

By: Dr. Radhakrishna Bellur

Venkataraja Puninchathaya, Tulu script founder

'ಅದೊಂದು ಆಕಸ್ಮಿಕ. ನಾನು ದಿನಾ ಭತ್ತದ ಗದ್ದೆಯ ಬದಿಯ ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಹತ್ತಾರು ಹೆಂಗಸರು ಒಟ್ಟಾಗಿ ಹಾಡುತ್ತಿದ್ದ ತುಳು ಹಾಡುಗಳನ್ನು ಕೇಳುತ್ತಿದ್ದೆ. ಕೆಲಸದೊಡನೆ ಆಯಾಸವನ್ನು ಮರೆಯುವುದಕ್ಕಾಗಿ ಅವರು ಹಾಡುತ್ತಿದ್ದ ಹಾಡು ಅಸ್ಪಷ್ಟವಾಗಿತ್ತು. ಏನೋ ಆ ಹಾಡುಗಳಲ್ಲಿ ನನಗೆ ವಿಶೇಷ ಕುತೂಹಲ ಉಂಟಾಗಿ ಅವರಿಂದ ಪುನಃ ಆ ಹಾಡನ್ನು ಹಾಡಿಸಿದೆ. ಅದು ಪುರಾಣ ಪುರುಷರನ್ನು ಹಾಡಿ ಹೊಗಳುವ ತುಳು ಪಾಡ್ದನವಾಗಿತ್ತು. ಹಾಡಿನಲ್ಲಿ ಬರುವ ಕೆಲವು ಶಬ್ದಗಳಿಗೆ ಅರ್ಥವನ್ನು ಅವರಿಂದಲೇ ಕೇಳಿ ತಿಳಿದುಕೊಂಡಿದ್ದೆ. ಹೀಗೆ, ಇಲ್ಲಿಂದ ಮುಂದೊತ್ತಿ ಸಾಗಿದ ನನ್ನ ಸಂಶೋಧನ ಕಾಯಕವು ಪ್ರಾಚೀನ ತುಳು ಮಹಾಕಾವ್ಯ 'ಶ್ರೀ ಭಾಗವತೋ'ದ ತನಕ ನನ್ನನ್ನು ತಲುಪಿಸಿದೆ.' ವೆಂಕಟರಾಜ ಪುಣಿಂಚತ್ತಾಯರು ಸಂಶೋಧನೆಗಾಗಿ ಸಂಶೋಧಕರಾದವರಲ್ಲ. ಆಕಸ್ಮಿಕವಾಗಿ ಸತ್ಯದ ಅನಾವರಣಕ್ಕೆ ಧುಮುಕಿದವರು.

ಅಭಿವಂದನೆ

By: Maheshwari U

Venkataraja Puninchathaya

ಡಾ. ವೆಂಕಟರಾಜ ಪುಣಿಂಚತ್ತಾಯರನ್ನು ತುಳುನಾಡ ಕೀರ್ತಿಶ್ರೀ ಎಂದು ಕರೆದುದರಲ್ಲಿ ಯಾವ ಅತಿಶಯವೂ ಇಲ್ಲ. ಪುಣಿಂಚತ್ತಾಯರಿಗೆ ಅರುವತ್ತು ತುಂಬಿದ ಸಂದರ್ಭದಲ್ಲಿ ಪ್ರೀತಿಗೌರವ ತುಂಬಿ ನಾನು ರಚಿಸಿದ ಈ ಹಾಡನ್ನು ಅರ್ಪಿಸುವ ಸದವಕಾಶ ನನಗೆ ಒದಗಿಬಂದಿತ್ತು. ಅವರು ನಾಡಿಗೆ ಸಲ್ಲಿಸಿದ ಸೇವೆಯ ಋಣಭಾರ ಅಷ್ಟು ದೊಡ್ಡದು. ಅದು ಈ ಹಾಡಿನಿಂದ ತೀರುವಂತಹದಲ್ಲ ಎಂದು ನನಗೆ ಗೊತ್ತು. ಪುಂಡೂರು ಎಂಬ ನೆಲದ ಪುಣ್ಯವೇ ಮಾನವಾಕೃತಿ ತಳೆದು ಭವಿಸಿದಂತೆ ಆ ಪ್ರಸಿದ್ಧ ಮನೆತನದಲ್ಲಿ ವೆಂಕಟರಾಜರ ಜನನವಾಯಿತು.ತಮ್ಮ ಎಣೆಯಿಲ್ಲದೆ ಸಾಧನೆಯಿಂದ, ಅಹಮಿಕೆಯಿಲ್ಲದ ವಿನಯದಿಂದ ನಾಡಿನ ಸಮಸ್ತ ಜನರ ಒಲುಮೆಗೆ ಅವರು ಪಾತ್ರರಾದರು. ಪಂಡಿತವಕ್ಕಿಯಾಗಿ ಪಾಂಡಿತ್ಯವನ್ನು ಮೆರೆದರು. ಕವಿಯಾಗಿ ಕವಿತೆಯ ಮಣಿಗಳನ್ನು ಪೋಣಿಸುತ್ತಲೂ ಬಂದರು. ತೌಳವ ಮಾತೆಯ ಮೇಲಿನ ಅಪ್ಪಟವಾದ ಭಕ್ತಿ ಅಭಿಮಾನಗಳು ಅಕೆಯ ಗೌರವವನ್ನು ಎತ್ತಿಹಿಡಿಯುವಲ್ಲಿ ಅವಿಶ್ರಾಂತವಾಗಿ ದುಡಿಯಲು ಅವರನ್ನು ಪ್ರೇರೇಪಿಸಿದವು.ಲಿಪಿಯಿಲ್ಲವೆಂದು ತಿಳಿಯಲಾದ ತುಳುಭಾಷೆಗೂ ಸ್ವತಂತ್ರವಾದ ಲಿಪಿ ಇದೆ.ಶಿಷ್ಟ ಕಾವ್ಯ ಪರಂಪರೆಯಿಲ್ಲವೆಂದು ಭಾವಿಸಲಾದ ತುಳುವಿನಲ್ಲೂ ಪ್ರಾಚೀನ ಕಾವ್ಯಸೃಷ್ಟಿ ನಡೆದಿದೆ -ಎಂದು ಇತಿಹಾಸ ಗರ್ಭದಲ್ಲಿ ಮರೆಯಾಗಿದ್ದ ಸತ್ಯವನ್ನು ತಮ್ಮ ಏಕಾಂಗವಾದ ಪರಿಶ್ರಮದಿಂದ ಎತ್ತಿತೋರಿಸಿದರು.

ಆಶುಕವಿ ದಾಮೋದರ ಪುಣಿಂಚತ್ತಾಯರು

By: Dr. Venkataraja Puninchathaya

 Damodara Puninchathaya, poet, scholar

ದಿ. ಪುಂಡೂರು ದಾಮೋದರ ಪುಣಿಂಚತ್ತಾಯರು `ಆಶುಕವಿ' ಎಂದು ಪ್ರಸಿದ್ಧಿ ಪಡೆದವರು. ಸಂದರ್ಭೋಚಿತವಾಗಿ ಕವಿತೆ ರಚಿಸುವುದರಲ್ಲಿ ಅವರನ್ನು ಮೀರುವವರಿಲ್ಲ. 1888ರಲ್ಲಿ ಜನಿಸಿದ ಅವರು 1976ರಲ್ಲಿ ನಿಧನಹೊಂದಿದರು. ಆ ಕಾಲದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಶಾಲೆಗಳಿರಲಿಲ್ಲ. ಮನೆಯಲ್ಲಿಯೇ ತಂದೆ ತಾಯಂದಿರು ಮಕ್ಕಳಿಗಾಗಿ ಏನನ್ನಾದರೂ ಕಲಿಸಿದರೆ ಅದುವೇ ಅವರ ವಿದ್ಯಾಭ್ಯಾಸ.

ಒಮ್ಮೆ ಅವರು ಕೊಲ್ಲೂರಿಗೆ ಹೋದರು. ಅದು ನವರಾತ್ರಿಯ ಸಮಯ. ಅಲ್ಲಿ ಅರ್ಚಕರನ್ನು ಕಂಡು ಪ್ರತಿದಿನವೂ ಉಷಃಕಾಲದ ಪೂಜೆಯ ಅನಂತರ ದೇವಿಯ ತ್ರಿಮಧುರಪ್ರಸಾದವನ್ನು ತಮಗೆ ಕೊಡಬೇಕೆಂದು ವಿನಂತಿಸಿದರು. ಹೀಗೆ ನವರಾತ್ರಿ ಯುದ್ದಕ್ಕೂ ಅವರು ಅಲ್ಲೆ ಇದ್ದುಕೊಂಡು ಸರಸ್ವತೀಮಂಟಪದಲ್ಲಿ ಬಾಲಾಸರಸ್ವತೀ ದೇವಿಯ ಜಪವನ್ನು ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಅವರಿಗೆ ಮನೆಯ ನೆನಪಾಯಿತು. ತಮ್ಮ ಅಣ್ಣ ಸುಬ್ರಾಯ ಪುಣಿಂಚತ್ತಾಯರಿಗೆ ಕವಿತಾರೂಪವಾಗಿ ಒಂದು ಪತ್ರ ಬರೆದರು. ಇದು ಅವರ ಮೊತ್ತಮೊದಲ ಕವಿತೆಯಾಯಿತು.

ಶ್ರದ್ಧಾಂಜಲಿ

By: Ramachandra Puninchathaya

 Damodara Puninchathaya, poet, scholar

ಈ ಕವನವನ್ನು ಡಾ. ವೆಂಕಟರಾಜ ಪುಣಿಂಚತ್ತಾಯರು ಸ್ವರ್ಗಸ್ಥರಾದಾಗ, ಅವರ ಕಿರಿಯ ಸಹೋದರ ಶ್ರೀ ರಾಮಚಂದ್ರ ಪುಣಿಂಚತ್ತಾಯರು ರಚಿಸಿ ಅವರಿಗೆ ಅರ್ಪಿಸಿದ್ದಾರೆ.

ಹೋದೆಯಾ ಪಂಡಿತ ಶಿರೋಮಣಿ |
ತಾಡವಾಲೆಯನರಸುತ ||
ತುಳುವ ಭಾಷೆಯ ಕರ್ಣ ಪರ್ವದಿ |
ಸಿಗದ ಸಾಲನು ಹುಡುಕುತ || 1 ||

ಪೋದೆಯಾ ನಮ್ಮಣ್ಣ ವೆಂಕಟ |
ರಾಜ ನಾಕಕೆ ಪೋದೆಯಾ ||
ಇಲ್ಲಿ ಸುಮ್ಮನೆ ಅಲ್ಲೇ ನಮ್ಮನೆ |
ಅರಿತು ದೂರಕೆ ಸರಿದೆಯಾ || 2 ||

Search


Search

Buy 'Mahajanapada'

'Mahajanapada' book contains complete set of articles written by Dr. Venkataraja Puninchathaya. This book is edited by Dr. Padekallu Vishnu Bhat. To avail this book contact here.

List of Articles

Popular Tags

Tulu Lipi Tulu Kavya Puninchathaya Pundoor Janapada Parthana ತುಳು Research Edneer Bhagavatho Shivalli Pongadiru Teacher ಚಂದ್ರಗಿರಿಯ ರಾಜಹಂಸ

Write to Us


About

This site is dedicated to 'Tulu Mahatma' Venkataraja Puninchathaya. All rights reserved ©

Social Links

Address

"Gayatri", Ithanadka
Kakkebettu post, Mulleria
Kasaragod dist, Kerala
671543
Ph : 04994260430

Powered by AEVUM DEVELOPERS