ತುಳು ಲಿಪಿ

Tribute

  • "ಪುಣಿಂಚತ್ತಾಯರು ನಾನಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಚೆಲ್ಲಿ ಶಾಶ್ವತವಾದ ಕೀರ್ತಿ ಪಡೆದು ’ಪಂಡಿತ’ ನಾಮದ ಸಾರ್ಥಕ್ಯವನ್ನು ತುಂಬಿರುತ್ತಾರೆ."
    His Holiness Sri Sri Sri Keshavananda Bharati Swamiji
    Sri Edaneeru Samsthanam
  • ತುಳು ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪುಣಿಂಚತ್ತಾಯರು ಅತ್ಯುತ್ತಮ ಸೇವೆ ಸಲ್ಲಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
    Dr. Veerendra Heggade
  • "ಯಕ್ಷಗಾನ ಅರ್ಥಗಾರಿಕೆಗೆ ಕಾವ್ಯಗುಣವನ್ನು ತುಂಬಿಸುವ ಪ್ರಯತ್ನ, ಕಾವ್ಯದ ಧ್ವನಿ ಮತ್ತು ಪ್ರತಿಮಾ ಶಕ್ತಿಯನ್ನು ಅತ್ಯಂತ ಮನೋಜ್ಞವಾಗಿ ಅಳವಡಿಸಿಕೊಂಡದ್ದು ಇದಕ್ಕೆ ಪುಣಿಂಚತ್ತಾಯರ ವಿಶಿಷ್ಟವಾದ ಕೊಡುಗೆ."
    Dr. Ramananda Banari
  • "ಸತ್ಸಂಗದ ಒಂದು ಉತ್ತಮವಾದ ಮಾದರಿಯನ್ನು ನಾನು ಅವರ ಒಡನಾಟದಲ್ಲಿ ಕಂಡಿದ್ದೇನೆ. ಸುಖ, ಸ೦ಕಟ ವಿನೋದ, ವಿಚಾರ ವಿನಿಮಯ, ಜಿಜ್ಞಾಸೆಗಳಿಗೆ ಸಮಾಧಾನಗಳಲ್ಲಿ ಸದಾ ತೆರೆದ ಮನಸ್ಸಿನ ಸಹಾಯಸಿದ್ಧ ಮನೋಧರ್ಮದ ಪುಣಿಂಚತ್ತಾಯರ ಸ್ನೇಹ ಒಂದು ಸುಖಕರ ಅನುಭವ."
    Dr. Prabhakara Joshi
  • "’ಹಾಲು ಸಕ್ಕರೆ ಸೇರಿ’ ಆಚಾರ್ಯರಾಗುವುದು ಕೆಲವರಿಗೆ ಮಾತ್ರ ಒಪ್ಪುವ ಹೋಲಿಕೆ. ಅ೦ಥವರಲ್ಲಿ ಈಗ ಕಾಣುವವರು ಮಿತ್ರರಾದ ವೆ೦ಕಟರಾಜ ಪುಣಿ೦ಚತ್ತಾಯರು. ಕವಿಯಾಗಿ, ಕಲಾವಿದನಾಗಿ, ಪ್ರಬ೦ಧಕಾರನಾಗಿ, ಸ೦ಶೊಧಕನಾಗಿ ಎಲ್ಲಕ್ಕು ಮಿಗಿಲಾದ ಅಧ್ಯಾಪಕನಾಗಿ ಮೆರೆದ ಪುಣಿ೦ಚತ್ತಾಯರೆ೦ದರೆ ಅವರಿಗೆ ಅವರೇ ಜೋಡಿ."
    Ramachandra Uchchila
  • "ಪುಣಿಂಚತ್ತಾಯರು ತೀರಾ ಸರಳ ಸಜ್ಜನಿಕೆಯ ಸ್ವಭಾವದವರು, ನಿಗರ್ವಿಗಳು. ತುಂಬಿದ ಕೊಡ ತುಳುಕುವುದಿಲ್ಲವೆಂಬ ಮಾತಿಗೆ ಉತ್ತಮ ಉದಾಹರಣೆಯಾಗಿದ್ದಾರೆ."
    Dr. Kayyara Kinyanna Rai
  • "ತುಳು ಭಾಷೆಯ ಪುರಾತನ ಕಾವ್ಯ ಸಂಶೋಧನೆಯ ವಿಚಾರದಲ್ಲಿ ಪುಣಿಂಚತ್ತಾಯರ ಸಾಹಸ ಸಾಧನೆ ಅನ್ಯಾದೃಶ್ಯವಾದದ್ದು."
    Dr. Amrita Someshwar
  • "ತುಳುವಿಗೆ ಪುಣಿಂಚತ್ತಾಯರು ನೀಡಿದ ಕೊಡುಗೆ ಅಪಾರವಾದದ್ದು.ತುಳು ಭಾಷೆಗೆ ಪ್ರತ್ಯೇಕ ಲಿಪಿ ಇದೆಯೆಂದು ಅವರು ಆಧಾರ ಸಹಿತ ತೋರಿಸಿ ಕೊಟ್ಟಿದ್ದಾರೆ."
    Dr. Srikrishna Bhat Arthikaje
  • "ಸಂದರ್ಭಕ್ಕೆ ಸರಿಹೊಂದುವ ಒಂದೆರಡು ವಿಚಾರಗಳನ್ನಷ್ಟೆ ಆಯ್ದುಕೊಂಡು ಸೊಗಸಾಗಿ ನಿರೂಪಿಸುತ್ತ ಪಾಂಡಿತ್ಯ ಪೂರ್ಣವಾಗಿ ಮಾತನ್ನಾಡುವ ಇವರ ಭಾಷಣ ಒಂದು ರಸದೌತಣ. "
    Dr. Radhakrishna Bellur
  • "ತನ್ನನ್ನು ಯಾರೊಬ್ಬರ ಮೇಲೂ ಹೇರಿಕೊಳ್ಳದೆ ಯಾರಿಗೂ ಹೊರೆಯಾಗದೆ ಇನ್ನೊಬ್ಬರ ಅಭಿಪ್ರಾಯಗಳನ್ನು ಗೌರವಿಸುತ್ತ ಸರಳತೆಯಲ್ಲಿ ಸ೦ತೊಷಪಡುತ್ತ, ಕನ್ನಡ-ಮಲಯಾಳಿ-ತುಳು ಭಾಷೆಗಳಿಗೆ ಸೇತುವೆಯಾಗಿ,ಸ೦ಸ್ಕ್ರತಿ-ಸಾಹಿತ್ಯ ಸ೦ಶೋಧನೆಗಳ ಕೈ೦ಕರ್ಯದಲ್ಲಿ ಮಗ್ನರಾಗಿ ತನ್ನ ಬದುಕನ್ನು ಅರ್ಥಪೂರ್ಣಗೊಳಿಸಿಕೊ೦ಡ ಅಪರೂಪದ ಗೆಳೆಯ ಶ್ರೀ ಪುಣಿ೦ಚತ್ತಾಯರು. ಸಜ್ಜನಿಕೆಗೆ ಒ೦ದು ಮಾದರಿ ಅವರು."
    Dr. Chandrashekara Damle

ಯಕ್ಷಗಾನದಲ್ಲಿ ಪರಂಪರೆಯ ಪ್ರಜ್ಞೆ

By: Dr. Venkataraja Puninchathaya

Yakshagana, History of Yakshagana, Yakshagana History, Bhagavata

ಯಕ್ಷಗಾನಕ್ಕೊಂದು ವಿಶಿಷ್ಟವಾದ ಪರಂಪರೆ ಇದೆಯೆಂದೂ, ಅದನ್ನು ನಾವು ಕೈಬಿಡಬಾರದೆಂದೂ ಬಹಳ ವರ್ಷಗಳಿಂದ ಹೇಳುತ್ತಾ ಬಂದಿದ್ದೇವೆ. ಆದರೆ ನಾಟಕಾದಿ ಕಲೆಗಳ ಬಗ್ಗೆ ಈ ಮಾತನ್ನು ನಾವು ಹೇಳುತ್ತಾ ಇಲ್ಲ. ಅಲ್ಲಿ ಹೊಸ ಹೊಸ ತಂತ್ರಗಳ ಆವಿಷ್ಕಾರವೇ ಕಲೆಯ ಬೆಳವಣಿಗೆಯ ಲಕ್ಷಣ ಎಂದು ನಿರ್ಭೀತಿಯಿಂದ ಹೇಳುತ್ತೇವೆ. ಅಲ್ಲಿ ನಿರ್ದೇಶಕನಿಂದ ನಿರ್ದೇಶಕನಿಗೆ ಪ್ರದರ್ಶನಗಳ ಸ್ವರೂಪ ವ್ಯತ್ಯಾಸಹೊಂದುತ್ತಾ ಹೋಗುತ್ತದೆ.

ಪರಂಪರೆಯನ್ನು ನಾವು ಒಂದು ಶಾಸ್ತ್ರ ಎನ್ನುವುದಾದರೆ, ಶಾಸ್ತ್ರವನ್ನು ಒಂದು ಪರಂಪರೆ ಎಂದು ಯಾಕೆ ಹೇಳಬಾರದು? ಆಗ ಭರತನ ನಾಟ್ಯಶಾಸ್ತ್ರವೂ ಒಂದು ಪರಂ ಪರೆಯಾಗುತ್ತದೆ. ನಾಟಕಕಾರರು ಆ ಪರಂಪರೆಯನ್ನು ಮೀರಬಹುದೇ? ರಂಗಭೂಮಿ ಯಲ್ಲಿ ಕೆಲವು ದೃಶ್ಯಗಳನ್ನು ಕಾಣಿಸಬಾರದು ಎಂದು ನಿಯಮವಿದೆ.
`ದೂರಾಧ್ವಾನಂ ವಧಂ ಯುದ್ಧಂ....' ಇತ್ಯಾದಿ ಕೆಲವು ದೃಶ್ಯಗಳನ್ನು `ಪ್ರತ್ಯಕ್ಷಾನಿ ನ ನಿರ್ದಿಶೇತ್' (ರಂಗದಲ್ಲಿ ಪ್ರತ್ಯಕ್ಷವಾಗಿ ಕಾಣಿಸಬಾರದು) ಎಂದು ನಾಟ್ಯಶಾಸ್ತ್ರ ಹೇಳುತ್ತದೆ.
ಆಶ್ಚರ್ಯವೆಂದರೆ ಯಕ್ಷಗಾನದಲ್ಲಿ `ದೂರಾಧ್ವಾನ'ವನ್ನು ರಂಗಭೂಮಿಗೆ ಒಂದು ಸುತ್ತು ಬರುವ ಮೂಲಕ ಸಣ್ಣ `ಅಧ್ವಾನ'ವನ್ನಾಗಿ ಮಾಡಲಾಗುತ್ತದೆ. ಅದು ಸಭಿಕರಿಗೆ ಅಸಹನೀಯವೆಂದು ಆಗುವುದಿಲ್ಲ. ವಧೆಯಂತೂ ಯಕ್ಷಗಾನದಲ್ಲಿ ಬೇಕೇ ಬೇಕು. `ಕಾಳಗ' ಎಂಬ ಪದವೇ ಯಕ್ಷಗಾನದ ಪರ್ಯಾಯಪದವಾಗಿರುವಾಗ ಅಂತಹ ಕಾಳಗದಲ್ಲಿ ವಧೆಯಾಗದಿರುತ್ತದೆಯೇ? ನಮ್ಮ ಯಕ್ಷಗಾನದ ಕೆಲವು ಪ್ರಸಂಗಗಳ ಹೆಸರೇ `ಕಾಳಗ' ಪದವನ್ನು ಒಳಗೊಂಡಿದೆ.

ಯಕ್ಷಗಾನಸಾಹಿತ್ಯ : ಸ್ವರೂಪ, ವೈಶಿಷ್ಟ್ಯ

By:Dr. Venkataraja Puninchathaya

Yakshagana Literature, Literature of Yakshagana, Yakshagana Sahitya, Yakshagana Song

ಯಕ್ಷಗಾನಸಾಹಿತ್ಯವನ್ನು ಎರಡಾಗಿ ವಿಂಗಡಿಸಬಹುದು. ಲಿಖಿತ ಮತ್ತು ಅಲಿಖಿತ ಎಂದು. ಲಿಖಿತವೆಂದರೆ ಯಕ್ಷಗಾನ ಹಾಡುಗಾರಿಕೆಗೆ ಸಂಬಂಧಿಸಿದ ಪ್ರಸಂಗಸಾಹಿತ್ಯ. ಅಲಿಖಿತವೆಂದರೆ ಅದಕ್ಕೆ ಸಂಬಂಧಿಸಿ ನಾಟಕೀಯವಾಗಿ ಬಳಸಲ್ಪಡುವ ಸಂಭಾಷಣೆ. ಇವೆರಡೂ `ಯಕ್ಷಗಾನಸಾಹಿತ್ಯ' ಎಂಬ ಶೀರ್ಷಿಕೆಯ ಕೆಳಗೆ ನಿಲ್ಲುತ್ತವೆ. ಯಕ್ಷಗಾನಸಾಹಿತ್ಯ - ಲಿಖಿತವಾಗಿರಲಿ - ಅಲಿಖಿತವಾಗಿರಲಿ - ಅದಕ್ಕೆ ಅದರದ್ದೇ ಆದ ಒಂದು ಪರಂಪರೆ, ಲಕ್ಷಣ ಮತ್ತು ಸೌಂದರ್ಯವಿದೆ. ಅದರ ಸಂಭಾಷಣೆಯ ಶೈಲಿ ನಾಟಕೀಯವಾಗಿಯೇ ಇದ್ದರೂ, ಇತರ ನಾಟಕಗಳ ಶೈಲಿಗಿಂತ ಕೆಲವೆಡೆ ತುಸು ಭಿನ್ನ ವಾಗಿಯೇ ಇದೆ ಎಂಬಂಶವನ್ನು ನಾವು ಮರೆಯುವಂತಿಲ್ಲ. ಆ ಭಿನ್ನತೆ ಎಲ್ಲಿ ಎಂಬುದನ್ನು ಗಮನಿಸೋಣ.

ಕಥಕ್ಕಳಿ - ಯಕ್ಷಗಾನ - ಕೇಳಿಕೆ

By: Dr. Venkataraja Puninchathaya

Yakshagana, Yakshagana Kathakali, Kathakali, Comparison of Yakshagana and Kathakali

ನೃತ್ಯ, ಗಾಯನ, ಚಿತ್ರ, ಶಿಲ್ಪ, ಸಾಹಿತ್ಯ, ಎಂಬೀ ಐದು ಸುಂದರಕಲಾರೂಪಗಳ ಸಮ್ಮಿಳನವೇ ಯಕ್ಷಗಾನ. ಇವುಗಳಲ್ಲಿ ಕೊನೆಯದಾದ ಸಾಹಿತ್ಯ ಅಥವಾ ಮಾತುಗಾರಿಕೆ ಯನ್ನು ಸಂಪೂರ್ಣವಾಗಿ ಉಪೇಕ್ಷಿಸಿ, ಮೊದಲನೆಯದಾದ ಕುಣಿತಕ್ಕೆ ಅಥವಾ ನಾಟ್ಯ ಕಲೆಯ ಅಂಶಕ್ಕೆ ಪ್ರಾಶಸ್ತ್ಯವನ್ನಿತ್ತು, ಖ್ಯಾತಿಯನ್ನು ಪಡೆದ ಕಲೆಯೇ ಕಥಕ್ಕಳಿ! ಕಥಕ್ಕಳಿ ಯಲ್ಲಿ ಮಾತುಗಾರಿಕೆ ಇಲ್ಲದಿದ್ದರೂ, ಸಮಗ್ರ ಕಥೆಯ ಶರೀರರೂಪವಾದ ಪ್ರಸಂಗಸಾಹಿತ್ಯ ವಂತೂ ಇದ್ದೇ ಇದೆ. ಹೀಗೆ ಮೇಲುನೋಟಕ್ಕೆ ಎರಡರಲ್ಲೂ ಈ ಐದು ಅಂಶಗಳಿದ್ದರೂ, ಇವೆರಡೂ ಬೇರೆ ಬೇರೆಯಾದ ಎರಡು ಸಮಷ್ಟಿ ಕಲೆಗಳು. ಆದರೂ ಇವುಗಳೊಳಗಿನ ಸಾಮ್ಯ-ವೈಷಮ್ಯಗಳನ್ನು ಒಂದಿಷ್ಟು ವಿಶ್ಲೇಷಣೆ ನಡೆಸುವ ಯತ್ನವೇ ಈ ಲೇಖನದ ಗುರಿ.

Search


Search

Buy 'Mahajanapada'

'Mahajanapada' book contains complete set of articles written by Dr. Venkataraja Puninchathaya. This book is edited by Dr. Padekallu Vishnu Bhat. To avail this book contact here.

List of Articles

Popular Tags

Tulu Lipi Yakshagana Puninchathaya Pundoor Janapada Kathakali ಯಕ್ಷಗಾನ ಸಾಹಿತ್ಯ Research Bhaagavata Shivalli ಕಲೆ Kannada

Write to Us


About

This site is dedicated to 'Tulu Mahatma' Venkataraja Puninchathaya. All rights reserved ©

Social Links

Address

"Gayatri", Ithanadka
Kakkebettu post, Mulleria
Kasaragod dist, Kerala
671543
Ph : 04994260430

Powered by AEVUM DEVELOPERS