ತುಳು ಲಿಪಿ

Tribute

  • "ಪುಣಿಂಚತ್ತಾಯರು ನಾನಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಚೆಲ್ಲಿ ಶಾಶ್ವತವಾದ ಕೀರ್ತಿ ಪಡೆದು ’ಪಂಡಿತ’ ನಾಮದ ಸಾರ್ಥಕ್ಯವನ್ನು ತುಂಬಿರುತ್ತಾರೆ."
    His Holiness Sri Sri Sri Keshavananda Bharati Swamiji
    Sri Edaneeru Samsthanam
  • ತುಳು ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪುಣಿಂಚತ್ತಾಯರು ಅತ್ಯುತ್ತಮ ಸೇವೆ ಸಲ್ಲಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
    Dr. Veerendra Heggade
  • "ಯಕ್ಷಗಾನ ಅರ್ಥಗಾರಿಕೆಗೆ ಕಾವ್ಯಗುಣವನ್ನು ತುಂಬಿಸುವ ಪ್ರಯತ್ನ, ಕಾವ್ಯದ ಧ್ವನಿ ಮತ್ತು ಪ್ರತಿಮಾ ಶಕ್ತಿಯನ್ನು ಅತ್ಯಂತ ಮನೋಜ್ಞವಾಗಿ ಅಳವಡಿಸಿಕೊಂಡದ್ದು ಇದಕ್ಕೆ ಪುಣಿಂಚತ್ತಾಯರ ವಿಶಿಷ್ಟವಾದ ಕೊಡುಗೆ."
    Dr. Ramananda Banari
  • "ಸತ್ಸಂಗದ ಒಂದು ಉತ್ತಮವಾದ ಮಾದರಿಯನ್ನು ನಾನು ಅವರ ಒಡನಾಟದಲ್ಲಿ ಕಂಡಿದ್ದೇನೆ. ಸುಖ, ಸ೦ಕಟ ವಿನೋದ, ವಿಚಾರ ವಿನಿಮಯ, ಜಿಜ್ಞಾಸೆಗಳಿಗೆ ಸಮಾಧಾನಗಳಲ್ಲಿ ಸದಾ ತೆರೆದ ಮನಸ್ಸಿನ ಸಹಾಯಸಿದ್ಧ ಮನೋಧರ್ಮದ ಪುಣಿಂಚತ್ತಾಯರ ಸ್ನೇಹ ಒಂದು ಸುಖಕರ ಅನುಭವ."
    Dr. Prabhakara Joshi
  • "’ಹಾಲು ಸಕ್ಕರೆ ಸೇರಿ’ ಆಚಾರ್ಯರಾಗುವುದು ಕೆಲವರಿಗೆ ಮಾತ್ರ ಒಪ್ಪುವ ಹೋಲಿಕೆ. ಅ೦ಥವರಲ್ಲಿ ಈಗ ಕಾಣುವವರು ಮಿತ್ರರಾದ ವೆ೦ಕಟರಾಜ ಪುಣಿ೦ಚತ್ತಾಯರು. ಕವಿಯಾಗಿ, ಕಲಾವಿದನಾಗಿ, ಪ್ರಬ೦ಧಕಾರನಾಗಿ, ಸ೦ಶೊಧಕನಾಗಿ ಎಲ್ಲಕ್ಕು ಮಿಗಿಲಾದ ಅಧ್ಯಾಪಕನಾಗಿ ಮೆರೆದ ಪುಣಿ೦ಚತ್ತಾಯರೆ೦ದರೆ ಅವರಿಗೆ ಅವರೇ ಜೋಡಿ."
    Ramachandra Uchchila
  • "ಪುಣಿಂಚತ್ತಾಯರು ತೀರಾ ಸರಳ ಸಜ್ಜನಿಕೆಯ ಸ್ವಭಾವದವರು, ನಿಗರ್ವಿಗಳು. ತುಂಬಿದ ಕೊಡ ತುಳುಕುವುದಿಲ್ಲವೆಂಬ ಮಾತಿಗೆ ಉತ್ತಮ ಉದಾಹರಣೆಯಾಗಿದ್ದಾರೆ."
    Dr. Kayyara Kinyanna Rai
  • "ತುಳು ಭಾಷೆಯ ಪುರಾತನ ಕಾವ್ಯ ಸಂಶೋಧನೆಯ ವಿಚಾರದಲ್ಲಿ ಪುಣಿಂಚತ್ತಾಯರ ಸಾಹಸ ಸಾಧನೆ ಅನ್ಯಾದೃಶ್ಯವಾದದ್ದು."
    Dr. Amrita Someshwar
  • "ತುಳುವಿಗೆ ಪುಣಿಂಚತ್ತಾಯರು ನೀಡಿದ ಕೊಡುಗೆ ಅಪಾರವಾದದ್ದು.ತುಳು ಭಾಷೆಗೆ ಪ್ರತ್ಯೇಕ ಲಿಪಿ ಇದೆಯೆಂದು ಅವರು ಆಧಾರ ಸಹಿತ ತೋರಿಸಿ ಕೊಟ್ಟಿದ್ದಾರೆ."
    Dr. Srikrishna Bhat Arthikaje
  • "ಸಂದರ್ಭಕ್ಕೆ ಸರಿಹೊಂದುವ ಒಂದೆರಡು ವಿಚಾರಗಳನ್ನಷ್ಟೆ ಆಯ್ದುಕೊಂಡು ಸೊಗಸಾಗಿ ನಿರೂಪಿಸುತ್ತ ಪಾಂಡಿತ್ಯ ಪೂರ್ಣವಾಗಿ ಮಾತನ್ನಾಡುವ ಇವರ ಭಾಷಣ ಒಂದು ರಸದೌತಣ. "
    Dr. Radhakrishna Bellur
  • "ತನ್ನನ್ನು ಯಾರೊಬ್ಬರ ಮೇಲೂ ಹೇರಿಕೊಳ್ಳದೆ ಯಾರಿಗೂ ಹೊರೆಯಾಗದೆ ಇನ್ನೊಬ್ಬರ ಅಭಿಪ್ರಾಯಗಳನ್ನು ಗೌರವಿಸುತ್ತ ಸರಳತೆಯಲ್ಲಿ ಸ೦ತೊಷಪಡುತ್ತ, ಕನ್ನಡ-ಮಲಯಾಳಿ-ತುಳು ಭಾಷೆಗಳಿಗೆ ಸೇತುವೆಯಾಗಿ,ಸ೦ಸ್ಕ್ರತಿ-ಸಾಹಿತ್ಯ ಸ೦ಶೋಧನೆಗಳ ಕೈ೦ಕರ್ಯದಲ್ಲಿ ಮಗ್ನರಾಗಿ ತನ್ನ ಬದುಕನ್ನು ಅರ್ಥಪೂರ್ಣಗೊಳಿಸಿಕೊ೦ಡ ಅಪರೂಪದ ಗೆಳೆಯ ಶ್ರೀ ಪುಣಿ೦ಚತ್ತಾಯರು. ಸಜ್ಜನಿಕೆಗೆ ಒ೦ದು ಮಾದರಿ ಅವರು."
    Dr. Chandrashekara Damle

ತುಳುವಿನಲ್ಲಿ ಗ್ರಂಥಸಂಪಾದನೆ

By: Venkataraja Puninchathaya

Venkataraja Puninchathaya, Tulu Literature, Ancient Tulu Scriptures

ಗ್ರಂಥರೂಪವಾಗಿ ತುಳುವಿನಲ್ಲಿ ದೊರೆತಿರುವ ಪುರಾತನ ಸಾಹಿತ್ಯಕೃತಿಗಳು ಮೂರು. ಶ್ರೀಭಾಗವತೊ, ಕಾವೇರಿ ಮತ್ತು ದೇವೀಮಹಾತ್ಮೆ. `ಶ್ರೀಭಾಗವತೊ’ವನ್ನು ಮಂಗಳೂರು ವಿಶ್ವವಿದ್ಯಾಲಯವೂ`ಕಾವೇರಿ’ ಮತ್ತು `ದೇವೀಮಹಾತ್ಮೆ’ ಕೃತಿಗಳನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರವೂ ಪ್ರಕಟಿಸಿವೆ.

ಈ ಮೂರು ಕೃತಿಗಳೂ ಏಕೈಕ ಹಸ್ತಪ್ರತಿ(Codex Unicus)ಯಾಗಿಯೇ ದೊರೆತುದರಿಂದ ಇಲ್ಲಿ ಪಾಠಾಂತರಗಳ ಗೊಂದಲವಿಲ್ಲವಾದರೂ ಗ್ರಂಥಸಂಪಾದನೆಗೆ ಅದೊಂದು ತೊಡಕೂ ಹೌದು. ಒಂದು ಪಾಠ ಅರ್ಥವಾಗದಿದ್ದರೆ ಇನ್ನೊಂದನ್ನಾದರೂ ಹುಡುಕೋಣವೆಂದರೆ ಅದಕ್ಕೆ ಇಲ್ಲಿ ಅವಕಾಶವಿಲ್ಲ. ಲಿಪಿಕಾರನ ಸ್ಖಾಲಿತ್ಯಗಳನ್ನು ಸಹಿಸಿಕೊಂಡೇ ಸಂಪಾದನಕಾರ್ಯ ಮುಂದುವರಿಯಬೇಕಾಗುತ್ತದೆ.

ಈ ಮೂರು ಗ್ರಂಥಗಳಲ್ಲೂ ಬಳಸಲಾಗಿರುವ ಭಾಷೆ ಸುಮಾರು 400-500ವರ್ಷಗಳ ಹಿಂದಿನದು. ಐನೂರು ವರ್ಷಗಳ ಹಿಂದೆ ನಮ್ಮ ಜನರು ಹೇಗೆ ತುಳು ಮಾತಾಡುತ್ತಿದ್ದರೆಂದು ಅರಿತುಕೊಳ್ಳಲು ಬೇರೆ ಯಾವ ದಾಖಲೆಗಳೂ ನಮಗೆ ಲಭ್ಯವಿಲ್ಲ; ಶಬ್ದಕೋಶ, ವ್ಯಾಕರಣಗ್ರಂಥ ಮುಂತಾದವುಗಳ ನೆರವೂ ನಮಗೆ ಸಿಗುವುದಿಲ್ಲ.

ಪ್ರಸ್ತಾವನೆ -ಶ್ರೀಭಾಗವತೊ

By: Venkataraja Puninchathaya

Shri Bhagavato, Discovery of Tulu Lipi, Vishnutunga, Venkataraja Puninchathaya, Old Tulu Epics

ತುಳುವಿನ ಆದಿಕಾವ್ಯವೆನಿಸಿದ ತುಳುಭಾಗವತವು `ವಿಷ್ಣುತುಂಗ' ಕವಿಯ ಒಂದು ಅಪೂರ್ವಕೃತಿ. ತುಳುವಿನಲ್ಲಿ ಶಿಷ್ಟಸಾಹಿತ್ಯವೇ ಇದ್ದಿರಲಿಲ್ಲ ಎಂಬ ಊಹೆಯನ್ನು ತೊಡೆದುಹಾಕಿ ಕಾವ್ಯರಚನೆಗೆ ಈ ಭಾಷೆ ತೊಡಕಾಗದು ಎಂದು ಪ್ರಮಾಣೀಕರಿಸಿ ತೋರಿಸಿದ ವಿಷ್ಣುತುಂಗನ ಸಾಹಸ ಶ್ಲಾಘನೀಯ.

ಜನಪದಕಾವ್ಯಗಳಿಗೆತುಳುವಿನಲ್ಲಿಕೊರತೆಯಿಲ್ಲ. ಭೂತಾರಾಧನೆಯ ಉದ್ದೇಶಕ್ಕಾಗಿ ಹುಟ್ಟಿಕೊಂಡ ನೂರಾರು ಪಾಡ್ದನಗಳು, ವ್ಯವಸಾಯದ ಹಾಡುಗಳು (ಓಬೇಲೆ ಪದಗಳು) ಹಾಗೂ ಇನ್ನಿತರ ಮನೋರಂಜನೆಯ ಗೀತಗಳು ಇಂದಿಗೂ ಜೀವಂತವಾಗಿವೆ. ಕಥೆ, ವರ್ಣನೆ, ಗಾತ್ರ, ಶೈಲಿಗಳಲ್ಲಿ ಅದ್ಭುತವೂ ರಮ್ಯವೂ, ವೈವಿಧ್ಯಮಯವೂ ಆದ ಪಾಡ್ದನಗಳ ಪ್ರಪಂಚತುಳುಸಾಹಿತ್ಯದಲ್ಲಿ ಒಂದು ದೊಡ್ಡ ವಿಭಾಗವೇ ಆಗಿದೆ. ಇವೆಲ್ಲಕ್ಕಿಂತ ಹೊರತಾದ ಹಾಗೂ ಸಂಪೂರ್ಣವ್ಯತ್ಯಸ್ತವಾದ ಒಂದು ವಿನೂತನ ಸಾಹಿತ್ಯರೂಪಕ್ಕೆ ತುಳುಭಾಗವತ ನಾಂದಿಹಾಡುತ್ತದೆ.

ಹಳಗನ್ನಡ ಕಾವ್ಯಗಳಂತೆ ಸುಪುಷ್ಟವೂ ವಿಸ್ತಾರವೂ ಆತ ತುಳುಭಾಗವತ ಮಹಾಕಾವ್ಯವು ಹಲವಾರು ಅಂಶಗಳಿಂದ ಮನನೀಯವಾಗಿದೆ. ಮುಖ್ಯವಾಗಿ ಇಲ್ಲಿಯ ಭಾಷೆಯೇ ಹಳೆಯ ಕಾಲದ್ದು. ಇಲ್ಲಿ ಬಳಸಿರುವ ತುಳು, ಈಗ ಮಾತಾಡುವ ತುಳು ಭಾಷೆಗಿಂತ ಭಿನ್ನವಾದುದು. ಕನ್ನಡದಲ್ಲಿ ಹಳಗನ್ನಡ ಇದ್ದಂತೆ, ತುಳುವಿನಲ್ಲೂ `ಹಳೆಯ ತುಳು’ ಎಂಬ ಪ್ರಭೇದವನ್ನು ಈ ಕೃತಿಯ ಮೂಲಕ ನಾವು ಗುರುತಿಸಬಹುದು.

ಪ್ರಸ್ತಾವನೆ - ಕಾವೇರಿ

By: Venkataraja Puninchathaya

Kaveri, Kaveri Tulu book, Venkataraja Puninchathaya, Old Tulu Epics, Tulu Lipi books

`ತುಳುಭಾಷೆಗೆ ಲಿಪಿಯಿಲ್ಲ. ತುಳುಭಾಷೆಯಲ್ಲಿ ಪ್ರಾಚೀನ ಲಿಖಿತ ಸಾಹಿತ್ಯವಿಲ್ಲ’ - ಎಂಬ ಇದುವರೆಗಿನ ಸಂಶೋಧಕರ ಮಾತನ್ನು ಅಲ್ಲಗಳೆದು `ಶ್ರೀಭಾಗವತೊ’ ಪ್ರಾಚೀನ ತುಳುಕಾವ್ಯವು ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕ 1984ರಲ್ಲಿ ಪ್ರಕಟವಾದಾಗ ತುಳುಸಾಹಿತ್ಯಚರಿತ್ರೆಯಲ್ಲಿಯೇ ಒಂದು ಹೊಸ ಅಧ್ಯಾಯಕ್ಕೆ ನಾಂದಿಯಾಯಿತು.

`ಶ್ರೀಭಾಗವತೊ’ ಪ್ರಕಟವಾದ ಬಳಿಕ, ಇತ್ತೀಚೆಗೆ ನಮ್ಮ ಅವಗಾಹನೆಗೆ ಬಂದ ಇನ್ನೊಂದು ಪ್ರಾಚೀನಕೃತಿಯೇ `ಕಾವೇರಿ’ ತುಳುಕಾವ್ಯ. ತಾಡವಾಲೆಗಳಲ್ಲಿ ಬರೆಯಲಾಗಿದ್ದ ಈ ಕೃತಿಯು ಅಪೂರ್ಣವಾಗಿದ್ದರೂ, ದೊರೆತಷ್ಟು ಭಾಗವು ಅತ್ಯಂತ ಕುತೂಹಲಕಾರಿಯಾಗಿದೆ. ಇದನ್ನು ಬರೆದ ಕವಿಯು ಯಾರು? ಈತ `ಶ್ರೀಭಾಗವತೊ’ವನ್ನು ಬರೆದ ಮಹಾಕವಿ ವಿಷ್ಣುತುಂಗನ ಸಮಕಾಲೀನನೆ? ಇತ್ಯಾದಿ ವಿಚಾರಗಳು ಇನ್ನೂ ತಿಳಿದುಬಂದಿಲ್ಲ. ಇದರ ಪ್ರಾರಂಭದ 119 ವಾಲೆ(Folio)ಗಳೂ, ಮಧ್ಯಭಾಗದ 23 ವಾಲೆಗಳು (Folio 211ರಿಂದ 233 ವರೆಗೆ) ಕೊನೆಯ ಕೆಲವು ವಾಲೆಗಳೂ ನಷ್ಟವಾಗಿವೆ. ಒಟ್ಟು 15 ಅಧ್ಯಾಯಗಳಿರಬೇಕಾದ ಈ ಕಾವ್ಯದ 6ನೆಯ ಅಧ್ಯಾಯದ ಕೊನೆಯ ಭಾಗ, 7-8 ಅಧ್ಯಾಯಗಳ ಸಮಗ್ರಭಾಗ, 9ನೆಯ ಅಧ್ಯಾಯದ ಮುಕ್ಕಾಲುಭಾಗ, 10ನೆಯ ಅಧ್ಯಾಯದ ಕೊನೆಯ ಭಾಗ ಮತ್ತು 11ನೆಯ ಅಧ್ಯಾಯದ ಒಟ್ಟು ಆರು ಪದ್ಯಗಳು ಹೀಗೆ ಇಷ್ಟು ಮಾತ್ರ ನಮಗೆ ಸಿಕ್ಕಿವೆ. ಅಂತೂ ಸಮಗ್ರಕಾವ್ಯದ ಮೂರನೆಯ ಒಂದು ಭಾಗ ಮಾತ್ರ ನಮಗೆ ಸಿಕ್ಕಿದೆಯೆಂದು ಹೇಳಬಹುದು.

ಪ್ರಸ್ತಾವನೆ - ತುಳು ದೇವೀಮಹಾತ್ಮೆ

By: Venkataraja Puninchathaya

Devi Mahaatme, Ancient Tulu Epics, Venkataraja Punchithaya, Tenkillaya, Devi Mahatme book, Kumble King, Tulu Lipi

`ತುಳು ದೇವೀಮಹಾತ್ಮೆ’ - ಈಗ ತುಳುವಿನಲ್ಲಿ ದೊರೆತಿರುವ ಪ್ರಪ್ರಥಮ ಗದ್ಯಕೃತಿ. ಹಳೆಯ ತುಳುವಿನ ಏನೇನೂ ಪರಿಚಯವಿಲ್ಲದಿರುವ ನಮಗೆ ಈ ಭಾಷೆ ಓದಲು ತೊಡಕೆನಿಸುವುದು ಸಹಜ. ಹಿಂದಿನ ಕಾಲದ ತುಳುವರು ಹೀಗೂ ಒಂದು ಭಾಷೆಯನ್ನು ಮಾತಾಡುತ್ತಿದ್ದಿರಬಹುದೆ - ಎಂದು ಸೋಜಿಗವಾಗಬಹುದು. ಈ ಉಪಭಾಷೆಯ ಸ್ವರೂಪವು ಶ್ರೀಭಾಗವತೊ - ಕಾವೇರಿ ಗದ್ಯಗಳ ಭಾಷೆಗಿಂತ ಅನೇಕಾಂಶಗಳಲ್ಲಿ ಭಿನ್ನವಾಗಿದೆ. ಪದಪ್ರಯೋಗ, ವಾಕ್ಯರಚನೆ (Struucture) ಶೈಲಿ ಎಲ್ಲವೂ ಇಲ್ಲಿ ಅಪೂರ್ವವಾಗಿ ಕಾಣಿಸುತ್ತದೆ.

ಶ್ರೀಭಾಗವತೊ-ಕಾವೇರಿ ಕೃತಿಗಳು ಪದ್ಯರೂಪದಲ್ಲಿರುವುದರಿಂದ ಅಲ್ಲಿಯ ಭಾಷೆ ಹೆಚ್ಚು `ಕಾವ್ಯಾತ್ಮಕ’ವಾಗಿದ್ದರೆ, ಇಲ್ಲಿಯ ಭಾಷೆ ಗದ್ಯರೂಪದಲ್ಲಿದ್ದು ಬಹುಮಟ್ಟಿಗೆ `ವಿವರಣಾತ್ಮಕ’ವಾಗಿದೆ.

ಮಾರ್ಕಂಡೇಯ ಪುರಾಣಾಂತರ್ಗತವಾದ ದೇವೀಮಹಾತ್ಮೆಯ ಕಥೆಯನ್ನು ತುಳುಗದ್ಯದಲ್ಲಿ ಹೇಳುವುದು ಈ ಗ್ರಂಥಕಾರನ ಉದ್ದೇಶ. ವಚನಭಾರತ, ವಚನ ಭಾಗವತ ಮುಂತಾದ ಕನ್ನಡ ಕೃತಿಗಳ ಹಾಗೆ ಇದು `ವಚನದೇವೀಮಹಾತ್ಮೆ’ ಎಂದೂ ಹೆಸರಿಸಬಹುದಾದ ಒಂದು ಪ್ರಾಚೀನಕೃತಿ ಎನ್ನಬಹುದು. ಇದು ಹಳೆಯ ತುಳುಭಾಷೆಯಲ್ಲಿರುವುದರಿಂದ ಅತ್ಯಂತ ಮೌಲಿಕವಾಗಿದೆ. ಆಧುನಿಕತುಳುವಿನಲ್ಲಿಲ್ಲದ, ಶ್ರೀಭಾಗವತೊ - ಕಾವೇರಿಗಳಲ್ಲೂ ಇಲ್ಲದ, ಕೆಲವು ಅಪೂರ್ವ ತುಳುಪದಗಳು ಇಲ್ಲಿ ಕಾಣಸಿಗುತ್ತವೆ.

ಪ್ರಸ್ತಾವನೆ - ಮಹಾಭಾರತೊ

By:Dr. Venkataraja Puninchathaya

Mahabharatha, Tulu Mahabharatha, Arunabja, Arunabja Mahabharatha

ಅರುಣಾಬ್ಜಕವಿಯ `ತುಳುಮಹಾಭಾರತ’ವು ತುಳುಸಾಹಿತ್ಯದ ಒಂದು ಅಮೂಲ್ಯಕೃತಿ. ಈಗ ದೊರೆತಿರುವ ತುಳುಕಾವ್ಯಗಳಲ್ಲಿ ಇದೇ ಅತ್ಯಂತ ಪ್ರಾಚೀನವಾದುದು. ಹಾಗೆಂದು ಅರುಣಾಬ್ಜನೇ ತುಳುವಿನ ಆದಿಕವಿಯಲ್ಲ; ಮಹಾಭಾರತವೇ ತುಳುವಿನ ಆದಿಕಾವ್ಯವೂ ಅಲ್ಲ. ಮಹಾಭಾರತಕ್ಕಿಂತಲೂ ಮೊದಲು ತುಳುವಿನಲ್ಲಿ ರಾಮಾಯಣಕಾವ್ಯ ರಚನೆಯಾಗಿತ್ತು ಎಂದು ಆತನೇ ಸೂಚಿಸಿರುತ್ತಾನೆ:

ತೆಳಿವುಳ್ಳಾಕುಳು ಭೂಮಿ-
ತುಳೈ ರಾಮಾಯಣ ಕಾವ್ಯೊ
ತುಳುಭಾಷೆ ಕವಿಕುಳು ವಿಸ್ತರಿತೆರೈಯೇರ್
ಅಳಿಯೇನಾಕುಳೆ ಪಾದ-
ನಳಿನೊಂತಾ ಮಧುವುಣ್ಕೀ
ಯಿಳೆಟ್ೀ ಭಾರತಕಾವ್ಯೊ ರಚಿಯೀಪುಪ್ಪೆ
(ಸಂಧಿ-1; ಪಾಡ್-9)

`ತುಳುಭಾಷೆ ಕವಿಕುಳು’ ಎಂದು ಬಹುವಚನವನ್ನು ಹೇಳಿರುವುದರಿಂದ ಕನಿಷ್ಠ ಪಕ್ಷ ಇಬ್ಬರಾದರೂ ತುಳುವಿನಲ್ಲಿ ರಾಮಾಯಣವನ್ನು ರಚಿಸರಬೇಕು - ಎಂಬ ಊಹೆಗೆ ಅವಕಾಶವಿದೆ. ಅಂತಹ ಅಜ್ಞಾತಕವಿಗಳ `ಪಾದಕಮಲಗಳ ತುಂಬಿ ನಾನು’ ಎಂಬ ಮಾತಿನಲ್ಲಿ ಆತನಿಗೆ ಪೂರ್ವಕವಿಗಳ ಬಗ್ಗೆ ಇರುವ ಗೌರವಭಾವವು ವ್ಯಕ್ತವಾಗುತ್ತದೆ.

ಮೊದಲ ಮಾತು - ತುಳು ಕರ್ಣಪರ್ವೊ

By: Dr. Venkataraja Puninchathaya

Karnaparva, Tulu Karnaparva, Ancient Tulu Epics, Venkataraja Puninchathaya, Tulu Script, Tulu lipi books

`ಹರಿಯಪ್ಪ’ ಎಂಬ ಹೆಸರಿನಿಂದ ಪ್ರಸಿದ್ಧನಾದ ಈ ಅರಸನನ್ನು ಎರಡನೆಯ ಹರಿಹರ ಎಂದು ಚರಿತ್ರೆಯಲ್ಲಿ ಗುರುತಿಸಿದ್ದಾರೆ. ಮಹಾಜ್ಞಾನಿಯಾದ ಸಾಯಣಾ ಚಾರ್ಯರುಇವನಆಸ್ಥಾನದಲ್ಲಿ ವಿದ್ವಾಂಸರಾಗಿದ್ದರು. ಅರಸನ ಸಲಹೆಯಂತೆ ಸಾಯಣಾ ಚಾರ್ಯರು ಋಗ್ವೇದ-ಯಜುರ್ವೇದ-ಸಾಮವೇದಗಳಿಗೆ ಭಾಷ್ಯ ಬರೆದರೆಂದು ಇತಿಹಾಸ ಹೇಳುತ್ತದೆ. ತುಳುಲಿಪಿಯಲ್ಲಿ ಬರೆದ ಸಾಯಣಭಾಷ್ಯದ ತಾಳೆಯೋಲೆಯ ಹಸ್ತಪ್ರತಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಕøತಿಸಂಶೋಧನ ಗ್ರಂಥಾಲಯದಲ್ಲಿದೆ. ಒಂದು ಕಾಲದಲ್ಲಿ ವಿಜಯನಗರ ಅರಸರ ಅರಮನೆಯಲ್ಲಿ ತುಳುಭಾಷೆ ಪ್ರಚಾರದಲ್ಲಿತ್ತು ಎನ್ನುವುದಕ್ಕೆ ಹರಿಯಪ್ಪನ ತುಳು ಕರ್ಣಪರ್ವವೇ ಸಾಕ್ಷಿ.

 

 

ಪ್ರಾಚೀನ ತುಳುಗ್ರಂಥಗಳ ಸಂಪಾದನೆ : ಕೆಲವು ನೆನಪುಗಳು

By: Venkataraja Puninchathaya

Tulu Grantha, Tulu Lipi Books, Venkataraja Puninchathaya

ಹಸ್ತಪ್ರತಿಗಳಲ್ಲಿರುವ ಹಳೆಯ ಸಾಹಿತ್ಯಕೃತಿಗಳನ್ನು ಹುಡುಕಿ ಓದುವುದು ಮತ್ತು ಅವುಗಳ ಬಗೆಗಿನ ಮಾಹಿತಿಗಳನ್ನು ಸಂಗ್ರಹಿಸುವುದರಲ್ಲಿ ನನಗೆ ಬಾಲ್ಯದಿಂದಲೂ ಆಸಕ್ತಿಯಿತ್ತು. ನನ್ನ ಪುಂಡೂರು ಮನೆತನದ ಹಿರಿಯರಲ್ಲಿ ಹಲವರು ಯಕ್ಷಗಾನಾಸಕ್ತರು; ಕೆಲವರು ಯಕ್ಷಗಾನಪ್ರಸಂಗಕರ್ತರು; ಕೆಲವರು ಪ್ರಸಂಗಗಳ ಪ್ರತಿಕಾರರು. ಈ ಹಿನ್ನೆಲೆಯಿಂದ ಬಂದ ನನಗೆ ಯಕ್ಷಗಾನಪ್ರಸಂಗಗಳೂ ಸೇರಿದಂತೆ ನಮ್ಮ ಪರಿಸರದಲ್ಲಿರುವ ಕಾಗದದ ಮತ್ತು ತಾಡವಾಲೆಯ ಹಸ್ತಪ್ರತಿಗಳನ್ನು ಸಂಗ್ರಹಿಸುವ ಮತ್ತು ಸಂಶೋಧನೆ ಮಾಡುವ ಅಭ್ಯಾಸ ಬೆಳೆಯಿತು.

ಹೀಗೆನಾನು ಸಂಗ್ರಹಿಸಿದವುಗಳಲ್ಲಿ ಕೆಲವನ್ನು ಉಪಯೋಗಿಸಿ ಮಾಹಿತಿ ಪಡೆದು, ಆಯಾ ಹಸ್ತಪ್ರತಿಗಳನ್ನು ರಕ್ಷಿಸಿಕೊಂಡುಬಂದವರಲ್ಲೇ ಕೊಟ್ಟು ಅದನ್ನು ಮುಂದೆಯೂ ಸಂರಕ್ಷಿಸಿಕೊಂಡು ಬರುವಂತೆ ಸೂಚನೆಗಳನ್ನು ಕೊಟ್ಟುದುಂಟು. ಕೆಲವನ್ನು ಆಯಾ ವಿಷಯದಲ್ಲಿ ಆಸಕ್ತರಾದ ಸಂಶೋಧಕವಿದ್ವಾಂಸರಿಗೆ ಉಪಯೋಗಕ್ಕಾಗಿ ನೀಡಿದ್ದುಂಟು. ಕೆಲವನ್ನು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಕೊಟ್ಟದ್ದುಂಟು. ಕಲ್ಲಿಕೋಟೆ ವಿಶ್ವವಿದ್ಯಾನಿಲಯದವರು ಪ್ರೋ. ಉಣಿತ್ತಿರಿಯವರ ನೇತೃತ್ವದಲ್ಲಿ ಕಾಸರಗೋಡು ಪರಿಸರಲ್ಲಿ ಹಸ್ತಪ್ರತಿಗಳ ಸಂಶೋಧನೆ ನಡೆಸುವ ಸಂದರ್ಭದಲ್ಲಿ, ಈ ಕ್ಷೇತ್ರದಲ್ಲಿ ನಾನು ಅದಾಗಲೇ ಒಂದಿಷ್ಟು ದುಡಿದವನಾದುದರಿಂದ ನನ್ನನ್ನು ತಮ್ಮ ಜೊತೆಗೆ ಕರೆದುಕೊಂಡರು. ಈ ಪರಿಸರದ ಹಲವಾರು ಹಳೆಯ ಮನೆಗಳಲ್ಲಿ ಸಂರಕ್ಷಿತವಾದ ಅನೇಕ ತಾಡವಾಲೆ ಗ್ರಂಥಗಳನ್ನು ಆಗ ಸಂಗ್ರಹಿಸಲಾಯಿತು. ಅವೆಲ್ಲ ಇಂದು ಕಲ್ಲಿಕೋಟೆ ವಿಶ್ವಿವಿದ್ಯಾನಿಲಯದಲ್ಲಿ ಸಂರಕ್ಷಿಸಿ ಇಡಲ್ಪಟ್ಟಿವೆ.

Search


Search

Buy 'Mahajanapada'

'Mahajanapada' book contains complete set of articles written by Dr. Venkataraja Puninchathaya. This book is edited by Dr. Padekallu Vishnu Bhat. To avail this book contact here.

List of Articles

Popular Tags

ತುಳು ಲಿಪಿ Tulu Kavya Puninchathaya Sri Bhagavatho Tulu Mahabharatho Devi Mahaatme ತುಳು Research Karnaparvo Tuluva Shivalli Pongadiru Kaaveri

Write to Us


About

This site is dedicated to 'Tulu Mahatma' Venkataraja Puninchathaya. All rights reserved ©

Social Links

Address

"Gayatri", Ithanadka
Kakkebettu post, Mulleria
Kasaragod dist, Kerala
671543
Ph : 04994260430

Powered by AEVUM DEVELOPERS