ತುಳು ಲಿಪಿ

Tribute

  • "ಪುಣಿಂಚತ್ತಾಯರು ನಾನಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಚೆಲ್ಲಿ ಶಾಶ್ವತವಾದ ಕೀರ್ತಿ ಪಡೆದು ’ಪಂಡಿತ’ ನಾಮದ ಸಾರ್ಥಕ್ಯವನ್ನು ತುಂಬಿರುತ್ತಾರೆ."
    His Holiness Sri Sri Sri Keshavananda Bharati Swamiji
    Sri Edaneeru Samsthanam
  • ತುಳು ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪುಣಿಂಚತ್ತಾಯರು ಅತ್ಯುತ್ತಮ ಸೇವೆ ಸಲ್ಲಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
    Dr. Veerendra Heggade
  • "ಯಕ್ಷಗಾನ ಅರ್ಥಗಾರಿಕೆಗೆ ಕಾವ್ಯಗುಣವನ್ನು ತುಂಬಿಸುವ ಪ್ರಯತ್ನ, ಕಾವ್ಯದ ಧ್ವನಿ ಮತ್ತು ಪ್ರತಿಮಾ ಶಕ್ತಿಯನ್ನು ಅತ್ಯಂತ ಮನೋಜ್ಞವಾಗಿ ಅಳವಡಿಸಿಕೊಂಡದ್ದು ಇದಕ್ಕೆ ಪುಣಿಂಚತ್ತಾಯರ ವಿಶಿಷ್ಟವಾದ ಕೊಡುಗೆ."
    Dr. Ramananda Banari
  • "ಸತ್ಸಂಗದ ಒಂದು ಉತ್ತಮವಾದ ಮಾದರಿಯನ್ನು ನಾನು ಅವರ ಒಡನಾಟದಲ್ಲಿ ಕಂಡಿದ್ದೇನೆ. ಸುಖ, ಸ೦ಕಟ ವಿನೋದ, ವಿಚಾರ ವಿನಿಮಯ, ಜಿಜ್ಞಾಸೆಗಳಿಗೆ ಸಮಾಧಾನಗಳಲ್ಲಿ ಸದಾ ತೆರೆದ ಮನಸ್ಸಿನ ಸಹಾಯಸಿದ್ಧ ಮನೋಧರ್ಮದ ಪುಣಿಂಚತ್ತಾಯರ ಸ್ನೇಹ ಒಂದು ಸುಖಕರ ಅನುಭವ."
    Dr. Prabhakara Joshi
  • "’ಹಾಲು ಸಕ್ಕರೆ ಸೇರಿ’ ಆಚಾರ್ಯರಾಗುವುದು ಕೆಲವರಿಗೆ ಮಾತ್ರ ಒಪ್ಪುವ ಹೋಲಿಕೆ. ಅ೦ಥವರಲ್ಲಿ ಈಗ ಕಾಣುವವರು ಮಿತ್ರರಾದ ವೆ೦ಕಟರಾಜ ಪುಣಿ೦ಚತ್ತಾಯರು. ಕವಿಯಾಗಿ, ಕಲಾವಿದನಾಗಿ, ಪ್ರಬ೦ಧಕಾರನಾಗಿ, ಸ೦ಶೊಧಕನಾಗಿ ಎಲ್ಲಕ್ಕು ಮಿಗಿಲಾದ ಅಧ್ಯಾಪಕನಾಗಿ ಮೆರೆದ ಪುಣಿ೦ಚತ್ತಾಯರೆ೦ದರೆ ಅವರಿಗೆ ಅವರೇ ಜೋಡಿ."
    Ramachandra Uchchila
  • "ಪುಣಿಂಚತ್ತಾಯರು ತೀರಾ ಸರಳ ಸಜ್ಜನಿಕೆಯ ಸ್ವಭಾವದವರು, ನಿಗರ್ವಿಗಳು. ತುಂಬಿದ ಕೊಡ ತುಳುಕುವುದಿಲ್ಲವೆಂಬ ಮಾತಿಗೆ ಉತ್ತಮ ಉದಾಹರಣೆಯಾಗಿದ್ದಾರೆ."
    Dr. Kayyara Kinyanna Rai
  • "ತುಳು ಭಾಷೆಯ ಪುರಾತನ ಕಾವ್ಯ ಸಂಶೋಧನೆಯ ವಿಚಾರದಲ್ಲಿ ಪುಣಿಂಚತ್ತಾಯರ ಸಾಹಸ ಸಾಧನೆ ಅನ್ಯಾದೃಶ್ಯವಾದದ್ದು."
    Dr. Amrita Someshwar
  • "ತುಳುವಿಗೆ ಪುಣಿಂಚತ್ತಾಯರು ನೀಡಿದ ಕೊಡುಗೆ ಅಪಾರವಾದದ್ದು.ತುಳು ಭಾಷೆಗೆ ಪ್ರತ್ಯೇಕ ಲಿಪಿ ಇದೆಯೆಂದು ಅವರು ಆಧಾರ ಸಹಿತ ತೋರಿಸಿ ಕೊಟ್ಟಿದ್ದಾರೆ."
    Dr. Srikrishna Bhat Arthikaje
  • "ಸಂದರ್ಭಕ್ಕೆ ಸರಿಹೊಂದುವ ಒಂದೆರಡು ವಿಚಾರಗಳನ್ನಷ್ಟೆ ಆಯ್ದುಕೊಂಡು ಸೊಗಸಾಗಿ ನಿರೂಪಿಸುತ್ತ ಪಾಂಡಿತ್ಯ ಪೂರ್ಣವಾಗಿ ಮಾತನ್ನಾಡುವ ಇವರ ಭಾಷಣ ಒಂದು ರಸದೌತಣ. "
    Dr. Radhakrishna Bellur
  • "ತನ್ನನ್ನು ಯಾರೊಬ್ಬರ ಮೇಲೂ ಹೇರಿಕೊಳ್ಳದೆ ಯಾರಿಗೂ ಹೊರೆಯಾಗದೆ ಇನ್ನೊಬ್ಬರ ಅಭಿಪ್ರಾಯಗಳನ್ನು ಗೌರವಿಸುತ್ತ ಸರಳತೆಯಲ್ಲಿ ಸ೦ತೊಷಪಡುತ್ತ, ಕನ್ನಡ-ಮಲಯಾಳಿ-ತುಳು ಭಾಷೆಗಳಿಗೆ ಸೇತುವೆಯಾಗಿ,ಸ೦ಸ್ಕ್ರತಿ-ಸಾಹಿತ್ಯ ಸ೦ಶೋಧನೆಗಳ ಕೈ೦ಕರ್ಯದಲ್ಲಿ ಮಗ್ನರಾಗಿ ತನ್ನ ಬದುಕನ್ನು ಅರ್ಥಪೂರ್ಣಗೊಳಿಸಿಕೊ೦ಡ ಅಪರೂಪದ ಗೆಳೆಯ ಶ್ರೀ ಪುಣಿ೦ಚತ್ತಾಯರು. ಸಜ್ಜನಿಕೆಗೆ ಒ೦ದು ಮಾದರಿ ಅವರು."
    Dr. Chandrashekara Damle

ಗೋವಿಂದ ಪೈ ಸಂಶೋಧನೆಗಳು

By:Venkataraja Puninchathaya

Rashtrakavi, Govinda Pai, Rashtrakavi Govinda Pai, Govinda Pai's works, Manjeshwara Govinda Pai

ಬಹುಭಾಷಾಜ್ಞಾನ, ಉನ್ನತಮೇಧಾವಿತ್ವ, ವಿಶಾಲಪುಸ್ತಕಭಂಡಾರ ಹಾಗೂ ನೂತನ ವಿಚಾರಗಳ ಬಗೆಗಿನ ಕುತೂಹಲ - ಇವು ದಿ. ಗೋವಿಂದ ಪೈಯವರನ್ನು ಉನ್ನತಮಟ್ಟದ ಒಬ್ಬ ಸಂಶೋಧಕನನ್ನಾಗಿ ಮಾಡಿದುವು ಎನ್ನಬಹುದು. ಕಾವ್ಯರಚನೆಗೆ ಕಲ್ಪನಾಶಕ್ತಿ ಹೇಗೆ ಮುಖ್ಯವೋ ಹಾಗೆಯೇ ಸಂಶೋಧಕನಿಗೆ ಕುತೂಹಲಪ್ರವೃತ್ತಿ ಅತಿ ಮುಖ್ಯವಾದುದು. ಜೊತೆಗೆ ಸತತಾಭ್ಯಾಸವೂ ಬೇಕು. ಈ ಎರಡು ಗುಣಗಳಂತೂ ಪೈಗಳಲ್ಲಿ ಧಾರಾಳವಾಗಿತ್ತು.
ಅವರು ಸಂಶೋಧನೆಯನ್ನು ಪ್ರಾರಂಭಮಾಡಿದ್ದು 1926ರಲ್ಲಿ. ಸಂಶೋಧನೆಯ ವಿಷಯ ಅವರೇ. ಅವರೇ -ಎಂದರೆ, ಅವರ ಸಮಾಜ - ಸಾರಸ್ವತಸಮಾಜ. ಸಾರಸ್ವತ ಸಮಾಜದವರು ಎಲ್ಲಿಂದ ಬಂದರು? ಅವರ ಮೂಲ ಎಲ್ಲಿ? -ಎಂಬಿತ್ಯಾದಿ ವಿಚಾರ ಗಳನ್ನು ಅವರು ಗಾಢವಾಗಿ ಅಧ್ಯಯನಮಾಡಿದರು.

 

ಕಯ್ಯಾರರ ಹೋರಾಟದ ಬದುಕು

By: Venkataraja Puninchathaya

Kayyara Kinyanna Rai, Kayyar Kinhanna Rai, Kasaragod Karnataka, Kasaragod Kannada

`ಕಾಸರಗೋಡು' ಎಂದಾಗ ಸಮಗ್ರ ಕನ್ನಡಿಗರಿಗೆ ನೆನಪಾಗುವ ಒಂದು ಅಕ್ಷರ `ಪೈ'; ಪೈ ಎಂದರೆ ಮಂಜೇಶ್ವರ ಗೋವಿಂದ ಪೈ ಎಂದು ಅರ್ಥ. ಅದೇ ಸಾಲಿನಲ್ಲಿ ಮತ್ತೆ ನಮಗೆ ನೆನಪಾಗುವ ಇನ್ನೊಂದು ಅಕ್ಷರ `ರೈ'. ರೈ ಎಂದರೆ ಸಂಸ್ಕೃತದಲ್ಲಿ `ಸಂಪತ್ತು' ಎಂದರ್ಥ. ಅದು ವೇದಕಾಲದ ಅರ್ಥ. ಆ ಅರ್ಥ ಈಗ ನಮ್ಮ ಜನರಿಗೆ ಮರೆತುಹೋಗಿದೆ. ಈಗ ನಮಗೆ ನೆನಪಾಗುವ ಅರ್ಥ `ರೈ ಎಂದರೆ ಕಿಞ್ಞಣ್ಣ ರೈ' ಎಂದು ಮಾತ್ರ. ಒಂದನೆಯ ತರಗತಿಯ ಮಕ್ಕಳಿಂದ ತೊಡಗಿ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳ ವರೆಗೂ ಈ ಪದ ಸುಪರಿಚಿತವಾದದ್ದು. ಆದರೆ, ಶ್ರೀ ರೈಯವರು ತಮ್ಮ ಹೆಸರಿನ ಮೂಲಕ ಆ ಹಳೆಯ ಅರ್ಥವನ್ನೂ ಪ್ರತಿಬಿಂಬಿಸುತ್ತಿದ್ದಾರೆ ಎನ್ನಲೂ ಬಹುದು. ಯಾಕೆಂದರೆ, ಕಾಸರಗೋಡಿನ ಅಥವಾ ಕನ್ನಡನಾಡಿನ ಸಾಮಾಜಿಕ ಸಾಹಿತ್ಯಕ ಹಾಗೂ ಸಾಂಸ್ಕೃತಿಕರಂಗಕ್ಕೆ ರೈಯವರ ಕೊಡುಗೆ ಸಂಪದ್ಭರಿತವಾದದ್ದು.

ಡಿ.ವಿ.ಜಿ. ಕಾವ್ಯಮೀಮಾಂಸೆ

By: Dr. Venkataraja Puninchathaya

DVG, D V Gundappa, Mankutimmana Kaggagalu, DVG Kavyamimamsa

ಡಿ.ವಿ.ಜಿ.- ಈ ಶತಮಾನದ ಒಂದು ಹಿರಿಯ ಶಕಪುರುಷ. ಅವರ ಪ್ರತಿಭೆ ಮತ್ತು ಪಾಂಡಿತ್ಯ ಎರಡೂ ಅಗಾಧ. ಅವರ ವ್ಯಕ್ತಿತ್ವವನ್ನು ಏಕಕೋನದಲ್ಲಿ ನಿಂತು ಅಳೆಯಲು ಸಾಧ್ಯವಿಲ್ಲ. ಅವರು ಕವಿಗಳೂ ಹೌದು - ದಾರ್ಶನಿಕರೂ ಹೌದು; ಪತ್ರಿಕೋದ್ಯಮಿಗಳೂ ಹೌದು, ಸಮಾಜಸೇವಕರೂ ಹೌದು. ಈ ಎಲ್ಲ ಕಾರ್ಯಕ್ಷೇತ್ರಗಳ ಅನುಭವಗಳೂ ಅವರ ಮಟ್ಟಿಗೆ ಪರಸ್ಪರ ಪೂರಕವಾಗಿವೆ. ಡಿ.ವಿ.ಜಿ., ಎಂಥ ಕವಿ? ದಾರ್ಶನಿಕಕವಿಯೋ? ಸೌಂದರ್ಯೋಪಾಸಕ ಕವಿಯೋ? ಹೊಸ ವಿಚಾರಕ್ರಾಂತಿಯನ್ನು ಬಯಸುವ ಕವಿಯೋ? ಎಂದು ಪ್ರಶ್ನಿಸುವು ದಾದರೆ, ಅವರು ಎಲ್ಲವೂ ಹೌದು. ಅವರ ಕಗ್ಗಗಳಲ್ಲಿ ಒಂದು ರೀತಿಯ ದಾರ್ಶನಿಕ ಪಂಥವಿದ್ದರೆ, ಅಂತಃಪುರಗೀತಗಳಲ್ಲಿ ಸೌಂದರ್ಯೋಪಾಸನೆಯ ಮೆರುಗು ಕಾಣುತ್ತದೆ. ಯಾವುದೇ ಹೊಸ ವೈಚಾರಿಕ ಅಂಶವನ್ನು ಅವರ ಹೃದಯವು ಮುಕ್ತವಾಗಿ ಸ್ವಾಗತಿಸುತ್ತದೆ - ಎಂಬುದಕ್ಕೆ ಅವರು ಅನುವಾದಿಸಿದ `ಉಮರನ ಒಸಗೆ' ಸಾಕ್ಷಿ.

ಶಿವಳ್ಳಿ ಬ್ರಾಹ್ಮಣರು

By: Dr. Venkataraja Puninchathaya

Brahmins of Tulu Nadu, Shivalli Brahmins, Temple Priests, Brahmins, Mayura Varma, Tulu Brahmins, Parashurama

ಶಿವಳ್ಳಿ ಎನ್ನುವ ಗ್ರಾಮಕ್ಕೆ ಮೊದಲು ಬಂದು ನೆಲೆಯಾದವರು ಶಿವಳ್ಳಿ ಬ್ರಾಹ್ಮಣರೆಂದು ಚರಿತ್ರೆ ಹೇಳುತ್ತದೆ. ಆಗಿನ ಶಿವಳ್ಳಿ ಗ್ರಾಮ, ಈಗಿನ ಶಿವಳ್ಳಿ ಗ್ರಾಮದಷ್ಟು ಸಣ್ಣದೇನಲ್ಲ. ಈಗಿನ ಕಡಿಯಾಳಿ, ಇಂದ್ರಾಳಿ, ಪೆರಂಪಳ್ಳಿ, ಮಣಿಪಾಲ ಎಲ್ಲಿ ಊರುಗಳು ಸೇರಿದ ಒಂದು ದೊಡ್ಡ ಗ್ರಾಮ ಆಗಿನ ಶಿವಳ್ಳಿ ಗ್ರಾಮ. ಈಗ ಉಡುಪಿಯಲ್ಲಿ ಬುದ್ಧಿ ಜೀವಿಗಳಿರುವ ಒಂದು ಪ್ರದೇಶವಾಗಿದೆ ಈ ಸ್ಥಳಗಳು. ಪೆರಂಪಳ್ಳಿ, ಪಾರ್ವಂಪಳ್ಳಿ, ಬ್ರಾಹ್ಮಣರ ಹಳ್ಳಿ (ಬ್ರಾಹ್ಮಣರು ಇರುವ ಹಳ್ಳಿ) ಎಂದರ್ಥ. `ಪಲ್ಲಿ' ದನಕರುಗಳು ಸಾಕಲು ಅನುಕೂಲವಾಗುವ ಜಾಗ - ಶಿವಪಲ್ಲಿ - ಶಿವಳ್ಳಿ ಎಂದರೆ ಶಿವಾರಾಧನೆ ನಡೆಯುವಂಥ ಜಾಗ ಎಂದರ್ಥ. ಶಿವಳ್ಳಿ ಗ್ರಾಮದಲ್ಲಿ ಆಗಿನ ಮಹಾಲಿಂಗೇಶ್ವರ ದೇವಸ್ಥಾನ ಈಗಲೂ ಇದೆ.

 

 

ಶಿವಳ್ಳಿ ಬ್ರಾಹ್ಮಣರ ಕುಲನಾಮಗಳು ಮತ್ತು ಸ್ಥಳನಾಮಗಳು

By: Dr. Venkataraja Puninchathaya

Brahmins of Tulu Nadu, Shivalli Brahmins, Temple Priests, Brahmins, Mayura Varma, Tulu Brahmins, Parashurama

ಮಯೂರವರ್ಮನು ಅಹಿಚ್ಛತ್ರದಿಂದ ಕರೆಸಿದ ಬ್ರಾಹ್ಮಣರು ತುಳುನಾಡಿನ ವಿವಿಧ ಗ್ರಾಮಗಳಲ್ಲಿ ಬಂದು ನೆಲೆಸಿದರು. ಆ ಗ್ರಾಮಗಳು ಒಟ್ಟು ಮೂವತ್ತೆರಡು ಎಂದು `ಗ್ರಾಮಪದ್ಧತಿ'ಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಅವನ ನಾಡಿನಲ್ಲಿ ಶ್ರೌತಸ್ಮಾರ್ತಾದಿ ಕರ್ಮಾನು ಷ್ಠಾನವು ನಿರಂತರವಾಗಿ ನಡೆಯುತ್ತಿರಬೇಕು ಎಂಬ ಉದ್ದೇಶದಿಂದ, ಪ್ರತಿಯೊಂದು ವಿಪ್ರ ಕುಟುಂಬಕ್ಕೂ ಒಂದೊಂದು ವೃತ್ತಿಯನ್ನು ಕಲ್ಪಿಸಲಾಯಿತು. ಹೀಗೆ ವೃತ್ತಿನಿರತರಾದವರಿಗೆ ಭಟ್ಟರು, ತಂತ್ರಿಗಳು, ಪಂಡಿತರು, ಪಕ್ಷನಾಥರು, ಸಭಾಪತಿಗಳು, ಬಲ್ಲಾಳರು, ಅಣ್ಣ ಗ್ರಾಮಣಿಗಳು, ಗ್ರಾಮಣಿಗಳು -ಇತ್ಯಾದಿ ಹೆಸರುಗಳನ್ನು ನೀಡಲಾಯಿತು. ಮೂಡ ಹದಿನಾರು ಗ್ರಾಮಕ್ಕೆ ಚಿಟ್ಟುಪಾಡಿ ಬಲ್ಲಾಳರು ಪಕ್ಷನಾಥರೆಂದೂ ಪಡು ಹದಿನಾರು ಗ್ರಾಮಕ್ಕೆ ನಿಡಂಬೂರು ಬಲ್ಲಾಳರು ಪಕ್ಷನಾಥರೆಂದೂ ಅಂದಿನ ತೀರ್ಮಾನವಾಗಿತ್ತು. ಚಿಟ್ಟುಪಾಡಿ ಬಲ್ಲಾಳರು, ನಿಡಂಬೂರು ಬಲ್ಲಾಳರು ಅರಸಾಡಳಿತೆಯಲ್ಲಿ ಸಹಭಾಗಿಗಳಾಗಿದ್ದರು ಎಂಬ ಸೂಚನೆ ತುಳುಮಹಾಭಾರತದ ಪೀಠಿಕಾಭಾಗದಿಂದ ತಿಳಿದುಬರುತ್ತದೆ. ತುಳು ಮಹಾ ಭಾರತದಲ್ಲಿ ಅರಸ ಎಂಬ ಅರ್ಥದಲ್ಲಿಯೇ 'ಬಲ್ಲಾಳ' ಎಂಬ ಪದವನ್ನು ಬಳಸಿದ ಉದಾಹರಣೆಯಿದೆ.

ಕನ್ನಡಕ್ಕೆ ಕಾಸರಗೋಡಿನ ಕೊಡುಗೆ

By: Dr. Venkataraja Puninchathaya

Kasaragod, Kasaragod Kannada, Kannada in Kasaragod

ಕಾಸರಗೋಡು ಒಂದು ಅಪೂರ್ವಗುಣವುಳ್ಳ ನೆಲ ಎನ್ನಬಹುದು. ಇಲ್ಲಿ ಪರಸ್ಪರ ಪ್ರಭಾವಿತವಾಗುತ್ತಿರುವ ಎರಡು ವಿಭಿನ್ನಸಂಸ್ಕೃತಿಗಳ ಛಾಯೆಯಿದ್ದು ಅವು ಈ ನೆಲದ ಗುಣವನ್ನು ಹೆಚ್ಚಿಸಿವೆ. `ಪಯಸ್ವಿನೀಂ ಕೇರಳಭೂಷಣಾಯಿತಾಮ್' ಎಂದು ಕಾವುಗೋಳಿಯ ಶ್ರೀ ನಾರಾಯಣ ಪಂಡಿತಾಚಾರ್ಯನು ಮಧ್ವವಿಜಯದಲ್ಲಿ ಹೇಳಿದ್ದಾನೆ. ಎಂದರೆ ಪಯ ಸ್ವಿನಿಯು ಕೇರಳದ ಗಡಿ ಎಂಬ ವಿಚಾರ ಸುಮಾರು ಕ್ರಿ.ಶ. ಹನ್ನೆರಡನೆಯ ಶತಮಾನ ದಲ್ಲೇ ಇತ್ಯರ್ಥವಾದಹಾಗಾಯಿತು. ಹಾಗಾಗಿ ಪಯಸ್ವಿನಿಯಿಂದೀಚೆಗಿನ ನೆಲ ಶುದ್ಧ ಕನ್ನಡನಾಡು ಎಂಬುದರಲ್ಲಿ ಸಂದೇಹವಿಲ್ಲ.

ರಾಮಾಯಣದಲ್ಲಿ ಪ್ರತಿಪಾದಿತವಾದ ಭಾರತೀಯ ಸಂಸ್ಕೃತಿ

By: Dr. Venkataraja Puninchathaya

Ramayana, Indian Culture, Tulu Ramayana, Valmiki Ramayana

ರಾಮಾಯಣವನ್ನು ರಚಿಸಿದ ಕವಿ ವಾಲ್ಮೀಕಿ. ಪೂರ್ವಾಶ್ರಮದಲ್ಲಿ ವ್ಯಾಧನಾಗಿದ್ದು, ಸುಲಿಗೆ-ದರೋಡೆಗಳನ್ನು ನಡೆಸುತ್ತಿದ್ದವನು ಅನಂತರ ಸಪ್ತರ್ಷಿಗಳ ಸಂಸರ್ಗದಿಂದ, ಅವರ ಮಾತಿನಿಂದ, ತಾನು ಮಾಡುತ್ತಿದ್ದ ಕೆಲಸ ತಪ್ಪು ಎಂಬ ಅರಿವಾಗಿ, ಪಶ್ಚಾತ್ತಾಪ ಹೊಂದಿ, ತಪಸ್ಸು ಮಾಡಿ, ಹೊಸ ವ್ಯಕ್ತಿಯಾಗಿ ಮೂಡಿಬಂದವನು. `ವಲ್ಮೀಕ' ಎಂದರೆ ಹುತ್ತ. ವ್ಯಾಧನು ತಪಸ್ಸಿಗೆ ಕುಳಿತ ಸ್ಥಳದಲ್ಲಿ ಕಾಲಾಂತರದಲ್ಲಿ ಹುತ್ತವು ಬೆಳೆಯಿತು. ವಲ್ಮೀಕದಿಂದ ಅಥವಾ ಹುತ್ತದಿಂದ ಹುಟ್ಟಿಬಂದವನೇ `ವಾಲ್ಮೀಕಿ'. ಹುತ್ತದ ಮಗ ಎಂದರೆ ಮಣ್ಣಿನ ಮಗ ಎಂದರ್ಥ. ವ್ಯಾಧನು ನಿಜವಾದ ಈ ಮಣ್ಣಿನ ಮಗ ಅಲ್ಲ.

 

 

Search


Search

Buy 'Mahajanapada'

'Mahajanapada' book contains complete set of articles written by Dr. Venkataraja Puninchathaya. This book is edited by Dr. Padekallu Vishnu Bhat. To avail this book contact here.

List of Articles

Popular Tags

Shivalli Brahmins Tulu Kavya Puninchathaya ಶಿವಳ್ಳಿ Mahajanapada DVG ತುಳು Research Kayyara Govinda Pai Kasaragod Pongadiru Kannada ಸಾಹಿತ್ಯ

Write to Us


About

This site is dedicated to 'Tulu Mahatma' Venkataraja Puninchathaya. All rights reserved ©

Social Links

Address

"Gayatri", Ithanadka
Kakkebettu post, Mulleria
Kasaragod dist, Kerala
671543
Ph : 04994260430

Powered by AEVUM DEVELOPERS