ತುಳು ಲಿಪಿ

Tribute

  • "ಪುಣಿಂಚತ್ತಾಯರು ನಾನಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಚೆಲ್ಲಿ ಶಾಶ್ವತವಾದ ಕೀರ್ತಿ ಪಡೆದು ’ಪಂಡಿತ’ ನಾಮದ ಸಾರ್ಥಕ್ಯವನ್ನು ತುಂಬಿರುತ್ತಾರೆ."
    His Holiness Sri Sri Sri Keshavananda Bharati Swamiji
    Sri Edaneeru Samsthanam
  • ತುಳು ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪುಣಿಂಚತ್ತಾಯರು ಅತ್ಯುತ್ತಮ ಸೇವೆ ಸಲ್ಲಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
    Dr. Veerendra Heggade
  • "ಯಕ್ಷಗಾನ ಅರ್ಥಗಾರಿಕೆಗೆ ಕಾವ್ಯಗುಣವನ್ನು ತುಂಬಿಸುವ ಪ್ರಯತ್ನ, ಕಾವ್ಯದ ಧ್ವನಿ ಮತ್ತು ಪ್ರತಿಮಾ ಶಕ್ತಿಯನ್ನು ಅತ್ಯಂತ ಮನೋಜ್ಞವಾಗಿ ಅಳವಡಿಸಿಕೊಂಡದ್ದು ಇದಕ್ಕೆ ಪುಣಿಂಚತ್ತಾಯರ ವಿಶಿಷ್ಟವಾದ ಕೊಡುಗೆ."
    Dr. Ramananda Banari
  • "ಸತ್ಸಂಗದ ಒಂದು ಉತ್ತಮವಾದ ಮಾದರಿಯನ್ನು ನಾನು ಅವರ ಒಡನಾಟದಲ್ಲಿ ಕಂಡಿದ್ದೇನೆ. ಸುಖ, ಸ೦ಕಟ ವಿನೋದ, ವಿಚಾರ ವಿನಿಮಯ, ಜಿಜ್ಞಾಸೆಗಳಿಗೆ ಸಮಾಧಾನಗಳಲ್ಲಿ ಸದಾ ತೆರೆದ ಮನಸ್ಸಿನ ಸಹಾಯಸಿದ್ಧ ಮನೋಧರ್ಮದ ಪುಣಿಂಚತ್ತಾಯರ ಸ್ನೇಹ ಒಂದು ಸುಖಕರ ಅನುಭವ."
    Dr. Prabhakara Joshi
  • "’ಹಾಲು ಸಕ್ಕರೆ ಸೇರಿ’ ಆಚಾರ್ಯರಾಗುವುದು ಕೆಲವರಿಗೆ ಮಾತ್ರ ಒಪ್ಪುವ ಹೋಲಿಕೆ. ಅ೦ಥವರಲ್ಲಿ ಈಗ ಕಾಣುವವರು ಮಿತ್ರರಾದ ವೆ೦ಕಟರಾಜ ಪುಣಿ೦ಚತ್ತಾಯರು. ಕವಿಯಾಗಿ, ಕಲಾವಿದನಾಗಿ, ಪ್ರಬ೦ಧಕಾರನಾಗಿ, ಸ೦ಶೊಧಕನಾಗಿ ಎಲ್ಲಕ್ಕು ಮಿಗಿಲಾದ ಅಧ್ಯಾಪಕನಾಗಿ ಮೆರೆದ ಪುಣಿ೦ಚತ್ತಾಯರೆ೦ದರೆ ಅವರಿಗೆ ಅವರೇ ಜೋಡಿ."
    Ramachandra Uchchila
  • "ಪುಣಿಂಚತ್ತಾಯರು ತೀರಾ ಸರಳ ಸಜ್ಜನಿಕೆಯ ಸ್ವಭಾವದವರು, ನಿಗರ್ವಿಗಳು. ತುಂಬಿದ ಕೊಡ ತುಳುಕುವುದಿಲ್ಲವೆಂಬ ಮಾತಿಗೆ ಉತ್ತಮ ಉದಾಹರಣೆಯಾಗಿದ್ದಾರೆ."
    Dr. Kayyara Kinyanna Rai
  • "ತುಳು ಭಾಷೆಯ ಪುರಾತನ ಕಾವ್ಯ ಸಂಶೋಧನೆಯ ವಿಚಾರದಲ್ಲಿ ಪುಣಿಂಚತ್ತಾಯರ ಸಾಹಸ ಸಾಧನೆ ಅನ್ಯಾದೃಶ್ಯವಾದದ್ದು."
    Dr. Amrita Someshwar
  • "ತುಳುವಿಗೆ ಪುಣಿಂಚತ್ತಾಯರು ನೀಡಿದ ಕೊಡುಗೆ ಅಪಾರವಾದದ್ದು.ತುಳು ಭಾಷೆಗೆ ಪ್ರತ್ಯೇಕ ಲಿಪಿ ಇದೆಯೆಂದು ಅವರು ಆಧಾರ ಸಹಿತ ತೋರಿಸಿ ಕೊಟ್ಟಿದ್ದಾರೆ."
    Dr. Srikrishna Bhat Arthikaje
  • "ಸಂದರ್ಭಕ್ಕೆ ಸರಿಹೊಂದುವ ಒಂದೆರಡು ವಿಚಾರಗಳನ್ನಷ್ಟೆ ಆಯ್ದುಕೊಂಡು ಸೊಗಸಾಗಿ ನಿರೂಪಿಸುತ್ತ ಪಾಂಡಿತ್ಯ ಪೂರ್ಣವಾಗಿ ಮಾತನ್ನಾಡುವ ಇವರ ಭಾಷಣ ಒಂದು ರಸದೌತಣ. "
    Dr. Radhakrishna Bellur
  • "ತನ್ನನ್ನು ಯಾರೊಬ್ಬರ ಮೇಲೂ ಹೇರಿಕೊಳ್ಳದೆ ಯಾರಿಗೂ ಹೊರೆಯಾಗದೆ ಇನ್ನೊಬ್ಬರ ಅಭಿಪ್ರಾಯಗಳನ್ನು ಗೌರವಿಸುತ್ತ ಸರಳತೆಯಲ್ಲಿ ಸ೦ತೊಷಪಡುತ್ತ, ಕನ್ನಡ-ಮಲಯಾಳಿ-ತುಳು ಭಾಷೆಗಳಿಗೆ ಸೇತುವೆಯಾಗಿ,ಸ೦ಸ್ಕ್ರತಿ-ಸಾಹಿತ್ಯ ಸ೦ಶೋಧನೆಗಳ ಕೈ೦ಕರ್ಯದಲ್ಲಿ ಮಗ್ನರಾಗಿ ತನ್ನ ಬದುಕನ್ನು ಅರ್ಥಪೂರ್ಣಗೊಳಿಸಿಕೊ೦ಡ ಅಪರೂಪದ ಗೆಳೆಯ ಶ್ರೀ ಪುಣಿ೦ಚತ್ತಾಯರು. ಸಜ್ಜನಿಕೆಗೆ ಒ೦ದು ಮಾದರಿ ಅವರು."
    Dr. Chandrashekara Damle

ದಕ್ಷಿಣತುಳುನಾಡಿನ ಬಾಕುಡರಿಂದ ಸರ್ಪಾರಾಧನೆ

By: Dr.Venkataraja Puninchathaya

Snake worship, Nagaaradhane, Tulu Nadu, Naga, Sarpa kola, Ashlesha Bali, Naga Tambila, Subrahmanya Temple, Ashlesha Bali Pooja, Nagamandala

ಪ್ರಾಚೀನತುಳುನಾಡಿನ ತೆಂಕಸೆರಗು ಕಾಸರಗೋಡು. ಇಲ್ಲಿ `ಬಾಕುಡ'ರೆಂಬ ಮೂಲನಿವಾಸಿಗಳಿದ್ದಾರೆ. ಇವರ ಕುಲದೈವ ಸರ್ಪ. ಭೂತಾರಾಧನೆಯ ಪದ್ಧತಿಯಂತೆ ಇವರು ಸರ್ಪಾರಾಧನೆ ನಡೆಸುತ್ತಿದ್ದಾರೆ. ಇವರ ವಸತಿಗಳ ಬಳಿಯಲ್ಲಿ ಪುರಾತನ ನಾಗಬನಗಳಿವೆ. ಇಚ್ಲಾಡಿಯಿಂದ ತಲಪ್ಪಾಡಿವರೆಗಿನ ನೆಲ ಬಾಕುಡರ ಆವಾಸಕೇಂದ್ರ. `ದಿರಡೇರ್' (ದ್ರಾವಿಡರು?) ಎಂದು ಕರೆಯಲ್ಪಡುವ ಇವರು 'ತಾವು ಈ ನೆಲದ ಮೂಲ ನಿವಾಸಿಗಳೆ'ಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ``ನೆಲದಲ್ಲಿ ಎಲ್ಲಿ ಬೇಕಾದರೂ ಸರಿಯೆ; ಮೂರು ಮುಷ್ಟಿ ಮಣ್ಣನ್ನು ತೆಗೆದು 'ಇದು ನಮ್ಮ ನೆಲ' ಎಂದು ದೈವದ ಮುಂದೆ ಪ್ರಮಾಣ ಮಾಡಿ ಹೇಳುವ ಧೈರ್ಯ ನಮಗಿದೆ'' ಎಂದು ದೃಢಭಕ್ತಿಯಿಂದ ಹೇಳುತ್ತಾರೆ. ಬೈಲುಕರೆಗಳಲ್ಲಿ ಮನೆಕಟ್ಟಿ ವಾಸಿಸುತ್ತಾ, ಬೇಸಾಯದ ಕೆಲಸಗಳಲ್ಲಿ ಸಹಕರಿಸುವ - ದುಡಿಯುವ ಇವರನ್ನು 'ಬೈಲ ಬಾಕುಡೆರ್' ಎಂದೂ ಕರೆಯುತ್ತಾರೆ.

ಕೇರಳದ `ತೆಯ್ಯಂ'ಗಳು ಮತ್ತು ತುಳುನಾಡಿನ `ದೆಯ್ಯೊಂ'ಕುಳು

By:Dr. Venkataraja Puninchathaya

Deiva, Bootha kola, kola, guligga, nema, tulu nadu, malayala bootha, bootharadhane

`ತೆಯ್ಯಂ' ಎಂಬುದು `ದೈವ' ಪದದ ದ್ರಾವಿಡೀಕೃತ ರೂಪ. ಅದನ್ನೇ ತುಳು ವಿನಲ್ಲಿ `ದೆಯ್ಯ' ಎನ್ನುತ್ತಾರೆ. ತುಳುನಾಡಿನಲ್ಲಿ ಮತ್ತು ಕೇರಳದಲ್ಲಿ ಈಯೆರಡು ರೂಪಗಳ ಆರಾಧನೆಯೂ ಸಮಾನವಾಗಿ ಜರಗುತ್ತದೆ. `ದೆಯ್ಯೊ'ಗಳಿಗೆ ಭೂತವೆಂಬ ಹೆಸರು ಅನಂತರ ಬಳಕೆಗೆ ಬಂದದ್ದು. ಭೂತಗಳು ತಮ್ಮ ನುಡಿಗಟ್ಟುಗಳಲ್ಲಿ ಹೆಚ್ಚಾಗಿ ತಮ್ಮನ್ನು `ದೆಯ್ಯೊ' ಎಂದೇ ಕರೆದುಕೊಂಡಿವೆಯಲ್ಲದೆ, ಭೂತವೆಂದು ಹೆಸರಿಸಿಕೊಂಡದ್ದಿಲ್ಲ. `ಭೂತ' ಎಂದರೆ ಪಂಚಭೂತಗಳು, ಜೀವಜಾಲ, ಪಿಶಾಚಗಣ ಎಂದೆಲ್ಲ ಅರ್ಥ ಗಳಿವೆ. ಹಾಗೆಯೇ ಸತ್ಯ ಎಂಬ ಅರ್ಥವೂ ಇದೆ. ನಮ್ಮ ಜನಪದರೂ ಭೂತವನ್ನು ಸತ್ಯೊ, ಮಾಯೆ ಎಂದೆಲ್ಲ ಸಂಬೋಧಿಸುವುದು ಸರ್ವೇ ಸಾಮಾನ್ಯ.

ಕಲಾರಾಧನೆಗೆ ದೇವತಾರಾಧನೆಯ ಕಳೆ

By: Dr. Venkataraja Puninchathaya

kalaraadhane, devataradhane, bootha kola, yakshagana

ಒಂದು ಪವಿತ್ರವಾದ ಪರಿಸರ. ಹರಿಹರರ ಸಾನ್ನಿಧ್ಯ ತುಂಬಿದ ಪುಣ್ಯಪೀಠ. ದೀಪಗಳು ಬೆಳಗುತ್ತವೆ; ಮಂಗಳಾರತಿಯಾಗುತ್ತದೆ. 'ಹರೇ ರಾಮ ಹರೇ ಕೃಷ್ಣ' ಭಜನೆಯ ಘೋಷ ವಾತಾವರಣವನ್ನು ಪುಲಕಿತಗೊಳಿಸುತ್ತದೆ. ನೆರೆದ ಭಕ್ತವೃಂದ ಆ ಗಾಯನಕ್ಕೆ ಸುಶ್ರಾವ್ಯವಾಗಿ ದನಿಗೂಡಿಸುತ್ತದೆ. ಮುಂದೆ ಕಲಾಮಂಟಪಕ್ಕೆ ಯಾತ್ರೆ. ಶಂಖ ಜಾಗಟೆ ನಾಗಸ್ವರಗಳ ಸುಮಧುರಧ್ವನಿ. ಯಾವುದೋ ಹೊಸ ಸನ್ನಿವೇಶಕ್ಕೆ ನಾವು ಹೊಂದಿ ಕೊಳ್ಳಲು ಬದಲಾಗುತ್ತಿರುವಂತೆ ಅನುಭವ. ಕಲಾಮಂಟಪದ ಎದುರು ಜನಸ್ತೋಮ ಕೈ ಮುಗಿದು ನಿಲ್ಲುತ್ತದೆ. ಮತ್ತೆ ಮಂಗಳಾರತಿಯ ಬೆಳಕಿನಲ್ಲಿ ಹೊಳೆ ಹೊಳೆವ ನವನೀತ ಕೃಷ್ಣನ ದಿವ್ಯಮೂರ್ತಿಯನ್ನು ಕಾಣುತ್ತೇವೆ. ಮರುಕ್ಷಣ ಎಲ್ಲವೂ ನಿಶ್ಶಬ್ದ... ಎತ್ತಲೂ ಮೌನ....ಮಂಟಪದ ಎದುರು ಸಂಗೀತದ ಉಪಕರಣಗಳು. ತಂಬೂರ, ಹಾರ್ಮೋನಿಯಂ, ಮೃದಂಗ, ಚೆಂಡೆ, ಜಾಗಟೆ, ಪಿಟೀಲು, ಕೈತಾಳ... ಇತ್ಯಾದಿ. ಅವು ಕೇವಲ ಬಾರಿಸುವ - ಹೊಡೆಯುವ ವಸ್ತುಗಳಲ್ಲ. ಗಂಧಪುಷ್ಪಗಳಿಂದ ಅಲಂಕೃತವಾದ ಆ ವಾದ್ಯಗಳು ಬರಿಯ ಮನೋರಂಜನೆಯ ಎಲ್ಲೆಯನ್ನು ದಾಟಿ ಇನ್ನೂ ಎತ್ತರದಲ್ಲಿದ್ದಂತೆ ನಮಗೆ ಭಾಸವಾಗು ತ್ತವೆ. ತಂಬೂರದ ನಾದತರಂಗ ಕೇಳತೊಡಗಿದೊಡನೆ ಜನರೆಲ್ಲ ಆಸೀನರಾಗುತ್ತಾರೆ.

ಮೊಗವೀರರು ಮತ್ತು ಸಮುದ್ರಜಾನಪದ

By: Dr. Venkataraja Puninchathaya

Mogaveera, Sea folk, fishermen, poems about fisherman , fishermen of Mangalore, Canara Fishermen, folk songs, folk songs of fishermen

ಮನುಷ್ಯ ತನ್ನ ನೋವು ನಲಿವುಗಳನ್ನು ನೆನೆಯುತ್ತಾ ಅಂತರ್ಮುಖಿಯಾದಾಗ ಸಾಹಿತ್ಯ ಹುಟ್ಟುತ್ತದೆ. ಅಂತೆಯೇ ತನ್ನ ಸುತ್ತುಮುತ್ತಲಿನ ಪರಿಸರಕ್ಕೆ ಸ್ಪಂದಿಸಿದಾಗಲೂ ಸಾಹಿತ್ಯ ಸೃಷ್ಟಿಯಾಗುತ್ತದೆ. ಅಂತರ್ಮುಖಿಯಾದವನ ನೋವು-ನಲಿವುಗಳು ಪರಿಸರ ದಿಂದಲೂ ಪ್ರಭಾವಿತವಾದಾಗ ಹುಟ್ಟುವ ಸಾಹಿತ್ಯವೇ ಸಹಜಸಾಹಿತ್ಯವೆನಿಸುತ್ತದೆ. ನಮ್ಮ ಜನಪದಸಾಹಿತ್ಯ ಇಂಥದು. `ಸಮುದ್ರಜಾನಪದ' ಎಂಬ ಈ ಶೀರ್ಷಿಕೆಯಡಿಯಲ್ಲಿ ಸಾಹಿತ್ಯಾಂಶಕ್ಕೆ ಮಾತ್ರ ಒತ್ತುಕೊಟ್ಟು, ಈ ಪ್ರಬಂಧವನ್ನು ಬರೆಯಲಾಗಿದೆ. `ಸಮುದ್ರಜಾನಪದ' ಎಂಬ ಪರಿಕಲ್ಪನೆ ಹೊಸತೇನೂ ಅಲ್ಲ; ಆದರೆ ಈ ವಿಭಾಗ ದಲ್ಲಿ ಲಭ್ಯವಾದ ಜನಪದಸಾಹಿತ್ಯವನ್ನು ಒಂದೆಡೆ ಕಲೆಹಾಕಿದ್ದು ಈ ಪ್ರಬಂಧದ ವೈಶಿಷ್ಟ್ಯ. ಮೊಗವೀರರಲ್ಲಿ ತುಳು ಹಾಗೂ ಕನ್ನಡ ಮಾತೃಭಾಷೆಯವರಿದ್ದಾರೆ. ಅವರು ಆಯಾ ಪ್ರದೇಶದ ತುಳು ಅಥವಾ ಕನ್ನಡವನ್ನು ಮಾತಾಡುತ್ತಾರೆ. ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲದಿಂದ ಕಲ್ಯಾಣಪುರದವರೆಗೆ ವಾಸ್ತವ್ಯವಿರುವ ಮೊಗವೀರರು ತುಳು ಮಾತಾಡು ವವರಾದರೆ, ಅಲ್ಲಿಂದ ಉತ್ತರದಲ್ಲಿ ವಾಸಿಸುವವರು ಕನ್ನಡ ಮಾತೃಭಾಷೆಯವರು. ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳ ಮುಂತಾದೆಡೆ ವಾಸಿಸುವ ಸೀಮಿತ ಸಂಖ್ಯೆಯ ಮೊಗವೀರರು ತುಳು ಮಾತಾಡುತ್ತಾರೆ.

ಪಾರ್ತನಗಳಲ್ಲಿ ಕಂಡುಬರುವ ವರ್ಣನೆ ಮತ್ತು ಕಾವ್ಯಸಂಪ್ರದಾಯಗಳು

By: Dr. Venkataraja Puninchathaya

parthana, folk song, folk literature, plantation songs

ಯಾವುದೇ ಭಾಷೆಯ ಸಾಹಿತ್ಯದ ಮೂಲರೂಪದರ್ಶನಕ್ಕೆ ನಮಗಿರುವ ಆಧಾರ ಜನಪದಸಾಹಿತ್ಯವೊಂದೇ. ಪಾಂಡಿತ್ಯದ ಚಂಡಮಾರುತಕ್ಕೆ ಒಳಗಾಗದೆ, ಪ್ರದರ್ಶನದ ಬೂಟಾಟಿಕೆಗೆ ಮರುಳಾಗದೆ, ನಿಷ್ಕಲ್ಮಷಹೃದಯದಿಂದ ಮುಕ್ತಕಂಠದಿಂದ ಸತ್ಯವೂ ಶಿವ ಮಯವೂ ಆದ ಒಂದು ವಾಕ್ಸೌಂದರ್ಯವನ್ನು ಬದುಕಿನ ಪರಮಾರ್ಥವನ್ನು ಸೃಜಿಸಿ ಕೊಟ್ಟ ನಮ್ಮ ಎಲ್ಲ ಜನಪದರೂ ಅಭಿನಂದನೀಯರೆ.

ಶಿಷ್ಟಸಾಹಿತ್ಯವು ವಿರಳವಾಗಿರುವ ತುಳುಭಾಷೆಯಲ್ಲಂತೂ ಈ ಜನಪದದ ಸ್ವಚ್ಛ ರೂಪವನ್ನು ನಾವು ಕಾಣುತ್ತೇವೆ. ಸ್ಫಟಿಕದಂತಹ ಭಾವನೆ, ಮುತ್ತಿನಂತಹ ಮಾತು, ಮಾಣಿಕದಂತಹ ಸೌಂದರ್ಯ - ಈ ಮೂರರ ಸಮ್ಮಿಲನವನ್ನು ಯಾವುದೇ ಕೃತಕವಾದ ಮೆರುಗಿಲ್ಲದೆ, ಸಹಜಸುಂದರವಾದ ರೂಪದಿಂದ ನಾವು ಕಾಣಬೇಕಾದರೆ ತುಳುವಿನ ಜನಪದಗೀತಗಳನ್ನು ಶರಣು ಹೋಗಬೇಕು. ಇಲ್ಲಿ ಯಾವುದೇ ಕಟ್ಟುಪಾಡುಗಳಿಲ್ಲ; ನಿಖರವಾದ ನಿಯಮಗಳಿಲ್ಲ. ಎಲ್ಲವೂ ಸ್ವಚ್ಛಂದ - ನಿರರ್ಗಳ. ಪಾಂಡಿತ್ಯಪೂರ್ಣವಾದ ಭಾಷೆಗೆ ಇಲ್ಲಿ ಸ್ಥಾನವಿಲ್ಲ. ಇದು ಹೃದಯದ ಭಾಷೆ. ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗಿ ನಮ್ಮ ಜನಪದರು ಹಾಡಲಿಲ್ಲ. ಅವರ ಅಂತರಂಗದ ಮಿಡಿತಗಳು ತಾವಾಗಿಯೇ ಅವರನ್ನು ಹಾಡಿಸಿದುವು - ಪ್ರೇರಿಸಿದುವು. ಒಂದು ಆಚರಣೆಯ ಹಿನ್ನೆಲೆಯ ಸಾಹಿತ್ಯವಾಗಿ ಹುಟ್ಟಿಕೊಂಡ ಅಥವಾ ಆರಾಧನೆಯ ಉದ್ದೇಶವಾಗಿ ಹುಟ್ಟಿಕೊಂಡ ತುಳುಪಾರ್ತನಗಳು ವಸ್ತುವರ್ಣನೆ ಭಾವನೆಗಳ ವೈವಿಧ್ಯದಿಂದಾಗಿ ಸಾಹಿತ್ಯದ ಉತ್ತಮಗುಣಗಳಿಗೆ ಸಾಕ್ಷಿಯಾಗಿವೆ.

ಒಂದು ಗ್ರಾಮದ ಜಾನಪದ ಸಂಗ್ರಹ ಯೋಜನೆ

By: Venkataraja Puninchathaya

Nettanige, Nettanige Mahalingeshwara Temple, Plantation songs, Nettanige grama

ಒಂದು ಗ್ರಾಮದ ಜಾನಪದ ಸಂಗ್ರಹ ಎಂಬ ಯೋಜನೆಗಾಗಿ ನಾನು ಆಯ್ದುಕೊಂಡ ಗ್ರಾಮವು ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ. ಸಾಕಷ್ಟು ವಿದ್ಯುತ್ ಸೌಲಭ್ಯ, ಬಸ್ಸುಗಳ ಸೌಕರ್ಯ, ಸಿನೆಮಾ, ಯಕ್ಷಗಾನ ಬಯಲಾಟ ಇತ್ಯಾದಿ ಮನೋರಂಜನೆಗಳು ಇಂತಹ ಯಾವುದೇ ವ್ಯವಸ್ಥೆಗಳಿಲ್ಲದ ಈ ಗ್ರಾಮದಲ್ಲಿ ದಟ್ಟ ಜಾನಪದ ಸಂಸ್ಕ್ರತಿ ಹರಡಿರಬಹುದು ಎಂಬ ಊಹೆಯಲ್ಲಿ ನಾನು ಈ ಗ್ರಾಮವನ್ನು ಆಯ್ದುಕೊಂಡೆ. ನನ್ನ ಊಹೆ ಸುಳ್ಳಾಗಲಿಲ್ಲ. ನಲುವತ್ತೊಂಬತ್ತು ಆಡಿಯೋ ಕ್ಯಾಸೆಟ್ಟು ಮತ್ತು ಒಂದು ವೀಡಿಯೋ ಕ್ಯಾಸೆಟ್ಟು ಹೀಗೆ ಒಟ್ಟು ಐವತ್ತು ಕ್ಯಾಸೆಟ್ಟುಗಳಲ್ಲಿ ಈ ಗ್ರಾಮದ ಜನಪದ ಸಂಸ್ಕ್ರತಿ ಲಭ್ಯವಾಗುವ ಮೂಲಕ ಯೋಜನೆಯು ಸಾರ್ಥಕತೆಯ ಮಟ್ಟವನ್ನು ತಲುಪಿದೆ ಎಂದು ನನ್ನ ಆಶಯ.

Search


Search

Buy 'Mahajanapada'

'Mahajanapada' book contains complete set of articles written by Dr. Venkataraja Puninchathaya. This book is edited by Dr. Padekallu Vishnu Bhat. To avail this book contact here.

List of Articles

Popular Tags

Tulu Lipi ನಾಗಾರಾಧನೆ Puninchathaya Pundoor Janapada Parthana ತುಳು Research ಭೂತ ಕೋಲ Shivalli Pongadiru Mogaveera

Write to Us


About

This site is dedicated to 'Tulu Mahatma' Venkataraja Puninchathaya. All rights reserved ©

Social Links

Address

"Gayatri", Ithanadka
Kakkebettu post, Mulleria
Kasaragod dist, Kerala
671543
Ph : 04994260430

Powered by AEVUM DEVELOPERS